ರಾಜ್ಯ

ಮಂಡ್ಯ: ಕಿರಿಯ ಹೆಂಡತಿ ಮಗನ ಜೊತೆ ಸೇರಿ ಮೊದಲ ಹೆಂಡತಿಯ ಮಗನನ್ನು ಕೊಲ್ಲಲು ಯತ್ನಿಸಿದ ತಂದೆ

Vishwanath S

ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ಮಗನ ಕೊಲೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಂಚೆಭುವನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.

ಪ್ರಸನ್ನ ಹಲ್ಲೆಗೊಳಗಾದ ಪುತ್ರ. ಆರೋಪಿ ತಂದೆ ಶಿವಲಿಂಗೇಗೌಡ ಕಿರಿಯ ಹೆಂಡತಿ ಮಗ ರಾಮಕೃಷ್ಣನೊಂದಿಗೆ ಸೇರಿ ಹಿರಿಯ ಹೆಂಡತಿ ಮಗನಾದ ಪ್ರಸನ್ನ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆ ಊರು ಬಿಟ್ಟು ಬೆಂಗಳೂರಿನಲ್ಲಿ ವಾಸವಿರುವ ಶಿವಲಿಂಗೇಗೌಡ ಮತ್ತು ರಾಮಕೃಷ್ಣ ಕುಟುಂಬದವರು, ಪ್ರಸನ್ನನ ಕೊಲೆಗೆ ಯತ್ನಿಸಿ, ಈ ಕೃತ್ಯಕ್ಕೆಂದು ಬಳಸಿಕೊಂಡಿದ್ದ ಕಾರನ್ನೂ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

SCROLL FOR NEXT