ರಾಜ್ಯ

ಚಿಕ್ಕೋಡಿಯಲ್ಲಿ ಭೀಕರ ರಸ್ತೆ ಅಪಘಾತ: ಹಲವು ಮಂದಿಗೆ ಗಾಯ

Manjula VN

ಚಿಕ್ಕೋಡಿ: ದ್ರಾಕ್ಷಿ ತುಂಬಿದ ಗೂಡ್ಸ್ ವಾಹನ ಹಾಗೂ ಮಿನಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಲವು ಮಂದಿ ಗಾಯಗೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ಕಮತನೂರ ಬಳಿಯ ಸಂಕೇಶ್ವರ- ಜೇವಗಿ೯ ರಾಜ್ಯ ಹೆದ್ದಾರಿ ಮೇಲೆ ನಡೆದಿದೆ.

ಅಪಘಾತದಲ್ಲಿ ಐವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮೂಲಗಳ ಪ್ರಕಾರ ದ್ರಾಕ್ಷಿ ತುಂಬಿಸಿಕೊಂಡು ಬೆಳಗಾವಿ ಕಡೆಗೆ ಸಾಗುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ, ಮದುವೆ ಮುಗಿಸಿಕೊಂಡು ಚಿಕ್ಕೋಡಿ ಕಡೆಗೆ ತೆರಳುತ್ತಿದ್ದ  ಮಿನಿ ಬಸ್ಸಿಗೆ ಢಿಕ್ಕಿ ಹೊಡೆದಿದೆ.

ಗಾಯಾಳುಗಳು ಚಿಕ್ಕೋಡಿ ತಾಲೂಕಿನ ಬಸನಾಳಗಡ್ಡೆ ಗ್ರಾಮದವರು ಎನ್ನಲಾಗಿದ್ದು, ಸಂಕೇಶ್ವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಿನಿ ಬಸ್ಸಿನಲ್ಲಿ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

SCROLL FOR NEXT