ರಾಜ್ಯ

ಉಡುಪಿ: ಬಂಡೆಗೆ ಢಿಕ್ಕಿಯಾದ ಟೂರಿಸ್ಟ್ ಬಸ್, 11 ಮಂದಿ ದಾರುಣ ಸಾವು

Raghavendra Adiga

ಕಾರ್ಕಳ: ಟೂರಿಸ್ಟ್ ಬಸ್ಸೊಂದು ಬಂಡೆಗೆ ಢಿಕ್ಕಿಯಾಗಿ ಸಂಭವಿಸ್ದ ಅಪಘಾತದಲ್ಲಿ 11 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದ ಮಾಳ ಗ್ರಾಮದಲ್ಲಿ ನಡೆದಿದೆ,

ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಕಾರ್ಕಳದ ಮಾಳ ಗ್ರಾಮದ ಸಮೀಪ ಅಪಘಾತಕ್ಕೀಡಾಗಿದೆ.

ಖಾಸಗಿ ಸಂಸ್ಥೆ ಯೋಜಿಸಿದ್ದ ಪ್ರವಾಸದ ಬಸ್ ಇದಾಗಿದೆ. ಬಸ್ಸಿನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದರು. ಮೃತರ ವಿವರ ಇನ್ನಷ್ಟೇ ತಿಳಿಯಬೇಕಿದೆ.

ಘಟನೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇನ್ನು ಸಾವಿನ ಸಂಖ್ಯೆ ಸಹ ಇನ್ನಷ್ಟು ಹೆಚ್ಚುವ ಭೀತಿ ಇದೆ. 

SCROLL FOR NEXT