ರಾಜ್ಯ

ಚಾಮರಾಜನಗರ: ಕಾಡ್ಗಿಚ್ಚಿಗೆ ಕಾರಣರಾದವರ ಪತ್ತೆಗೆ ಅರಣ್ಯ ಇಲಾಖೆಯಿಂದ ಡ್ರೋನ್ ಕಣ್ಗಾವಲು

Raghavendra Adiga

ಚಾಮರಾಜನಗರ: ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕಳೆದ ವರ್ಷ ಸಂಭವಿಸಿದ ಕಾಡ್ಗಿಚ್ಚಿನಂತಹ ಕಹಿ ಘಟನೆಗಳ ನಂತರ ಕಾಡ್ಗಿಚ್ಚು ತಡೆಗಟ್ಟಲು, ಕಾಡ್ಗಿಚ್ಚಿಗೆ ಕಾರಣರಾದವರನ್ನು ಪತ್ತೆ ಮಾಡಲು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್‌ಗಳನ್ನು ಬಳಸಲು ನಿರ್ಧರಿಸಿದ್ದಾರೆ.

ಅರಣ್ಯ ಪ್ರದೇಶಗಳಲ್ಲಿ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ನಿಗಾ ಇಡಲು ಸಹ ಡ್ರೋನ್‍ ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಹುಲಿ ರಕ್ಷಿತಾರಣ್ಯಗಳಾದ ಬಂಡಿಪುರ, ನಾಗರಹೊಳೆ ಮತ್ತು ಬಂಡೀಪುರಗಳಲ್ಲಿ ಡ್ರೋನ್ ಗಳನ್ನು ಬಳಸಿ, ಮೈಸೂರು ಅಥವಾ ಚಾಮರಾಜನಗರದಲ್ಲಿ ದೃಶ್ಯಗಳ ಪರಿಶೀಲನಾ ಕೇಂದ್ರವನ್ನು ಸ್ಥಾಪಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ.

ಒಟ್ಟು ಹದಿಮೂರು ವಲಯಗಳಲ್ಲಿ 40 ರಿಂದ 50 ಸಿಬ್ಬಂದಿ ನೇಮಕ ಮಾಡಲಿದ್ದು ಅವರು ದಿನದ ಇಪ್ಪತ್ತನಾಲ್ಕು ಗಂಟೆ ಕಾಲ ಕಾಡ್ಗಿಚ್ಚಿನ ಬಗೆಗೆ ನಿಗಾ ಇಡಲಿದ್ದಾರೆ. ಅಲ್ಲದೆ ಇಂತಹಾ ಫೈರ್ ವಾಚರ್ ಗಳಿಗೆ ಅರಣ್ಯ ಇಲಾಖೆ ವತಿಯಿಂದಲೇ ಜೀವವಿಮಾ ಸೌಲಭ್ಯ ಸಹ ದೊರಕಲಿದೆ. ಕೆಲವೊಂದು ದುರಂತಗಳಲ್ಲಿ ಸಿಬ್ಬಂದಿ ಪ್ರಾಣ ಹೋಗುವ ನಿದರ್ಶನಗಳಿರುವ ಕಾರಣ ಇಲಾಖೆ ಈ ಉಪಕ್ರಮಕ್ಕೆ ಮುಂದಾಗಿದೆ.

ಕಳೆದ ವರ್ಷ : ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಸುಮಾರು ಹದಿನೈದು ಸಾವಿರ ಎಕರೆ ಅರಣ್ಯ ಭಸ್ಮವಾಗಿತ್ತು.

SCROLL FOR NEXT