ರಾಜ್ಯ

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕಾಸರಗೋಡಿನ ಮೂವರ ದುರ್ಮರಣ

Shilpa D

ಬೆಂಗಳೂರು: ಮೇಲ್ಸತುವೆಯ ಡಿವೈಡರ್‌ನಲ್ಲಿದ್ದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಗುಡೇರಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಸಂಭವಿಸಿದೆ.

ತಿರುಪತಿಗೆ ತೆರಳಿದ್ದ ಮೃತರು ದೇವರ ದರ್ಶನ‌ ಮುಗಿಸಿ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು,‌ ಆರು ಮಂದಿಗೆ ಗಂಭೀರ ಗಾಯಗಳಾಗಿವೆ.

ಕಾಸರಗೋಡಿನ ಮಂಜೇಶ್ವರ್ದ ಕಿಶನ್‌ ಬೆಜ್ಜ, ಮಂಜೇಶ್ವರ್ ಚರ್ಚ್ ಸಮೀಪದ ನಿವಾಸಿ ಅಕ್ಷಯ್‌, ಅಂಗಡಿ ಪದವು ನಿವಾಸಿ ಮೋಣಪ್ಪ ಮೇಸ್ತ್ರಿ ಮೃತಪಟ್ಟವರು ಎಂದು ತಿಳಿದುಬಂದಿದೆ. ಗಾಯಗೊಂಡ ಆರು ಮಂದಿಯನ್ನು ಚಿಕಿತ್ಸೆಗಾಗಿ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

SCROLL FOR NEXT