ಆನೆಗೊಂದಿ ಉತ್ಸವಕ್ಕೆ ಸಂಭ್ರಮದ ಸಮಾರೋಪ: ನಟ ಯಶ್ ಭಾಗಿ 
ರಾಜ್ಯ

ಆನೆಗೊಂದಿ ಉತ್ಸವಕ್ಕೆ ಸಂಭ್ರಮದ ಸಮಾರೋಪ: ನಟ ಯಶ್ ಭಾಗಿ 

ಎರಡು ದಿನಗಳ ಕಾಲ ನಡೆದ ಐತಿಹಾಸಿಕ ಆನೆಗೊಂದಿ ಉತ್ಸವ ಅದ್ಧೂರಿ ಸಮಾರೋಪ ಕಂಡಿದ್ದು, ಸ್ಯಾಂಡಲ್ ವುಡ್ ಸ್ಟಾರ್ ನಟ ಯಶ್ ಭಾಗಿಯಾಗಿದ್ದರು. 

ಕೊಪ್ಪಳ: ಎರಡು ದಿನಗಳ ಕಾಲ ನಡೆದ ಐತಿಹಾಸಿಕ ಆನೆಗೊಂದಿ ಉತ್ಸವ ಅದ್ಧೂರಿ ಸಮಾರೋಪ ಕಂಡಿದ್ದು, ಸ್ಯಾಂಡಲ್ ವುಡ್ ಸ್ಟಾರ್ ನಟ ಯಶ್ ಭಾಗಿಯಾಗಿದ್ದರು. 

ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಟ ಯಶ್, ಯುವಕರಿಗೆ ಕೆರೆ ಉಳಿಸಲು ಮನವಿ ಮಾಡಿದ್ದಾರೆ. ಸಮಾರೋಪ ಸಮಾರಂಭದ ಬಳಿಕ ನಡೆದ ವಿವಿಧ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರಿಗೆ ಮನೋರಂಜನೆ ನೀಡಿದವು.

ಜ್ಯೂನಿಯರ್ ಜಾನಕಿ ಹಾಡು ಒಂದು ಕಡೆ ಸಂಗೀತಾ ಮೂಲಕ ಮನರಂಜನೆ ನೀಡಿದರೆ, ರಾಕಿಂಗ್ ಸ್ಟಾರ್ ಯಶ್ ಆನೆಗೊಂದಿ ಉತ್ಸವಕ್ಕೆ ಬಂದು ಡೈಲಾಗ್ ಹೇಳಿ ಜನರಿಗೆ ಮನರಂಜನೆ ನೀಡಿದರು. ವಿಶೇಷವೇಂದರೆ, ಕೊಪ್ಪಳದ ಯಶೊಮಾರ್ಗದ ಬಗ್ಗೆ ಅವರು ಮಾತನಾಡಿದ್ದು, ಯುವಕರಿಗೆ ಪ್ರೆರಣೆ ನೀಡಿತು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರ ಗ್ರಾಮದಲ್ಲಿ ತಾವು ಕೆರೆ ಹೂಳೆತ್ತಿದ ಬಗ್ಗೆ ಯಶ್ ಮಾತನಾಡಿದರು. ಯುವಕರಿಗೆ ಕೆರೆ ಉಳಿಸಲು ಯಶ್ ಮನವಿ ಮಾಡಿದ್ದು, ಜನ ಪ್ರತಿನಿಧಿಗಳು, ಅಧಿಕಾರಿಗಳು, ನೀವು ಮನಸ್ಸು ಮಾಡಿದರೆ ಕೊಪ್ಪಳಕ್ಕೆ ಬರದ ನಾಡು ಅನ್ನೋ ಹಣೆ ಪಟ್ಟಿ ಕಳಚಬಹುದು ಎಂದು ಹೇಳಿದರು. ಕೊಪ್ಪಳ ಜಿಲ್ಲೆ ನನಗೆ ಯಾವಾಗಲೂ ಅಚ್ಚು ಮೆಚ್ಚು, ಕೊಪ್ಪಳ ಜನರ ಆಶೀರ್ವಾದ ನನ್ನ ಮೇಲೆ ಇರಬೇಕೆಂದರು.

ಇನ್ನು ಮೊಬೈಲ್ ಮಲ್ಲಪ್ಪ ಎಂದು ಖ್ಯಾತಿ ಪಡೆದ ಧಾರವಾಡದ ಹಾಸ್ಯ ಕಲಾವಿದ ಜನರಿಗೆ ಸಖತ್ ಮನರಂಜನೆ ನೀಡಿದರು. ಬೆಂಗಳೂರಿನ ಚಿತ್ರತಂಡದ ಸಂತೆಯಿಂದ ನಡೆದ ಕಾರ್ಯಕ್ರಮಗಳು ನೋಡುಗರನ್ನ ತನ್ನತ್ತ ಸೆಳೆದವು. ಕಾರ್ಯಕ್ರಮದ ಕುರಿತು ಮಾತನಾಡಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರತಿ ವರ್ಷ ಆನೆಗೊಂದಿ ಉತ್ಸವ ಆಚರಣೆ ಮಾಡುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿದ್ದಾರೆ.

ಒಟ್ಟಾರೆ ಎರಡು ದಿನಗಳ ಕಾಲ ನಡೆದ ಆನೆಗೊಂದಿ ಉತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದೆ. ಕೆಲವು ಸಣ್ಣ ಪುಟ್ಟ ಗೊಂದಲಗಳನ್ನ ಹೊರತುಪಡಿಸಿದಅರೆ ಆನೆಗೊಂದಿ ಉತ್ಸವಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ಐದು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಆನೆಗೊಂದಿ ಉತ್ಸವ ಈ ಬಾರಿ ಆಚರಣೆ ಮಾಡಿದ್ದು,ಈ ಭಾಗದ ಜನರಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನ ಮರಕಳಿಸುವಂತೆ ಮಾಡ್ತು.

-ಬಸವರಾಜ ಕರುಗಲ್, ಕೊಪ್ಪಳ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT