ಮಂಗಳೂರು: ರಾಮಲಕ್ಷ್ಮಣ ಕಂಬಳ ಎಂದೇ ಹೆಸರಾಗಿರುವ ಮೂರನೇ ವಾರ್ಷಿಕ ಮಂಗಳೂರು ಕಂಬಳ ನಗರದ ಬಂಗ್ರ ಕೊಳೊರು ಗೋಲ್ಡ್ ಪಿಂಚ್ ಮೈದಾನದಲ್ಲಿ ಜನವರಿ 25 ರ ರಾತ್ರಿ ಆಯೋಜಿಸಲಾಗಿದೆ.
ಶನಿವಾರ ರಾತ್ರಿ ರಾಮ-ಲಕ್ಷ್ಮಣ ಕಂಬಳ ನಡೆಯಲಿದೆ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬ್ರಿಜೇಶ್ ಚೌಟಾ ಇಂದು ಪ್ರಕಟಿಸಿದ್ದಾರೆ.
ಆರು ವರ್ಗಗಳಲ್ಲಿ ರಾತ್ರಿ ಪೂರ್ತಿ ಕಂಬಳ ನಡೆಯಲಿದೆ. ಕಾರ್ಯಕ್ರಮವನ್ನು ಜನವರಿ 25ರಂದು ಬೆಳಗ್ಗೆ ಉದ್ಘಾಟಿಸಲಾಗುವುದು, ಮತ್ತೊಂದು ಕಾರ್ಯಕ್ರಮ ಸಂಜೆ 6 ಗಂಟೆಗೆ ನಡೆಯಲಿದೆ ಎಂದರು.
ಕಂಬಳ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ 26 ರಂದು ಬೆಳಗ್ಗೆ 8 ಗಂಟೆಗೆ ಆಯೋಜಿಸಲಾಗಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಡಿ.ವಿ.ಸದಾನಂದಗೌಡ, ಸಂಸದ ನಳಿನ್ ಕುಮಾರ್ ಕಟೀಲ್ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.