ರಾಜ್ಯ

ಮಂಗಳೂರು: ನಾಳೆ ರಾತ್ರಿ ಮೂರನೇ ರಾಮ-ಲಕ್ಷ್ಮಣ ಕಂಬಳ

Lingaraj Badiger

ಮಂಗಳೂರು: ರಾಮಲಕ್ಷ್ಮಣ ಕಂಬಳ ಎಂದೇ ಹೆಸರಾಗಿರುವ ಮೂರನೇ ವಾರ್ಷಿಕ ಮಂಗಳೂರು ಕಂಬಳ ನಗರದ ಬಂಗ್ರ ಕೊಳೊರು ಗೋಲ್ಡ್ ಪಿಂಚ್ ಮೈದಾನದಲ್ಲಿ ಜನವರಿ 25 ರ ರಾತ್ರಿ  ಆಯೋಜಿಸಲಾಗಿದೆ.

ಶನಿವಾರ ರಾತ್ರಿ ರಾಮ-ಲಕ್ಷ್ಮಣ ಕಂಬಳ ನಡೆಯಲಿದೆ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬ್ರಿಜೇಶ್  ಚೌಟಾ ಇಂದು ಪ್ರಕಟಿಸಿದ್ದಾರೆ.

ಆರು ವರ್ಗಗಳಲ್ಲಿ ರಾತ್ರಿ ಪೂರ್ತಿ ಕಂಬಳ ನಡೆಯಲಿದೆ. ಕಾರ್ಯಕ್ರಮವನ್ನು ಜನವರಿ 25ರಂದು ಬೆಳಗ್ಗೆ ಉದ್ಘಾಟಿಸಲಾಗುವುದು, ಮತ್ತೊಂದು ಕಾರ್ಯಕ್ರಮ ಸಂಜೆ 6 ಗಂಟೆಗೆ ನಡೆಯಲಿದೆ ಎಂದರು.

ಕಂಬಳ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ 26 ರಂದು ಬೆಳಗ್ಗೆ 8 ಗಂಟೆಗೆ ಆಯೋಜಿಸಲಾಗಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಡಿ.ವಿ.ಸದಾನಂದಗೌಡ, ಸಂಸದ ನಳಿನ್ ಕುಮಾರ್ ಕಟೀಲ್  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರ ಗಣ್ಯರು  ಭಾಗವಹಿಸಲಿದ್ದಾರೆ.

SCROLL FOR NEXT