ಗಣತಂತ್ರಕ್ಕೆ ಬಂದ ಬಾಲಗಾಂಧಿಗೆ ಶಿಕ್ಷಣ ಸಚಿವರು ಫಿದಾ. 
ರಾಜ್ಯ

ಗಣತಂತ್ರಕ್ಕೆ ಬಂದ ಬಾಲಗಾಂಧಿಗೆ ಶಿಕ್ಷಣ ಸಚಿವರು ಫಿದಾ. 

ನಗರದಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನನ್ನು ಕಂಡು ಶಿಕ್ಷಣ ಸಚಿವರೇ ಫಿದಾ ಆಗಿದ್ದರು. ಬಾಲಕನಿಗೆ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳ ಸುರಿಮಳೆಗೆ ಬಾಲಕ ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ.

ಚಾಮರಾಜನಗರ: ನಗರದಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನನ್ನು ಕಂಡು ಶಿಕ್ಷಣ ಸಚಿವರೇ ಫಿದಾ ಆಗಿದ್ದರು. ಬಾಲಕನಿಗೆ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳ ಸುರಿಮಳೆಗೆ ಬಾಲಕ ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ.

ಚಾಮರಾಜನಗರ: ಜಿಲ್ಲಾಡಳಿತ ವತಿಯಿಂದ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನಿಗೆ ಶಿಕ್ಷಣ ಸಚಿವ ಎಸ್‌.ಸುರೇಶ ಕುಮಾರ್ ಮನಸೋತರು.

ಗಾಂಧಿ ವೇಷ ಧರಿಸಿದ್ದ 3ನೇ ತರಗತಿ ಸಾದಿಕ್ ಉಲ್ಲಾ ಖಾನ್ ಎಂಬ ವಿದ್ಯಾರ್ಥಿಯನ್ನು ಕಂಡು ವೇದಿಕೆಯಿಂದ ಕೆಳಗಿಳಿದ ಶಿಕ್ಷಣ ಸಚಿವರು ಆತನೊಂದಿಗೆ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳಿಗೆ ಪಟಾಪಟ್ ಎಂದು ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ. 

 ಶಿಕ್ಷಣ ಸಚಿವ ಫಿಧಾ
ಇದೇ ವೇಳೆ, ಎರಡೂವರೆ ತಾಸು ಬಣ್ಣ ಹಚ್ಚಿಕೊಳ್ಳಲು ಸಮಯ ಬೇಕಿದ್ದು ತನ್ನ ಅಮ್ಮ ತನಗೆ ವೇಷಭೂಷಣ ಹಾಕುತ್ತಾರೆ ಎಂದು ತಿಳಿದಿದ್ದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ಬಳಿ ತೆರಳಿ ಮಾತನಾಡಿಸಿ ಹಾಸ್ಯ ಚಟಾಕಿಗಳನ್ಕು ಹಾರಿಸಿದರು‌.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT