ಡಾ.ಸುಧಾಕರ್ 
ರಾಜ್ಯ

'ದೇಹವೆಂಬ ಗುಡಿಗೆ ವೈದ್ಯರೇ ದೇವರು': ವೈದ್ಯರ ದಿನಾಚರಣೆ ನಿಮಿತ್ತ ಸಚಿವ ಡಾ. ಸುಧಾಕರ್ ಹಾರೈಕೆ

ದೇಹವೆಂಬ ಗುಡಿಗೆ ವೈದ್ಯರೇ ದೇವರು ಎಂದು ಹೇಳುವ ಮೂಲಕ ವೈದ್ಯರ ದಿನಾಚರಣೆ ನಿಮಿತ್ತ ಸಚಿವ ಡಾ.ಕೆ ಸುಧಾಕರ್ ಸಮಸ್ತ ವೈದ್ಯರಿಗೆ ಶುಭ ಕೋರಿದ್ದಾರೆ.

ಬೆಂಗಳುರು: ದೇಹವೆಂಬ ಗುಡಿಗೆ ವೈದ್ಯರೇ ದೇವರು ಎಂದು ಹೇಳುವ ಮೂಲಕ ವೈದ್ಯರ ದಿನಾಚರಣೆ ನಿಮಿತ್ತ ಸಚಿವ ಡಾ.ಕೆ ಸುಧಾಕರ್ ಸಮಸ್ತ ವೈದ್ಯರಿಗೆ ಶುಭ ಕೋರಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ದೇಹವೆಂಬ ಗುಡಿಗೆ ವೈದ್ಯರೇ ದೇವರು" ಎನ್ನಲಾಗುತ್ತದೆ. ಪ್ರಸ್ತುತ ಈ ಸಾಂಕ್ರಾಮಿಕದ ಸಮಯದಲ್ಲಿ ನಮ್ಮ ವೈದ್ಯರುಗಳ ಅಪಾರ ಪರಿಶ್ರಮ, ಸೇವೆ, ನಿಷ್ಟೆಗಳನ್ನು ನಾವು ಕಾಣುತ್ತಿದ್ದೇವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು ಇವರು! ಈ ವೈದ್ಯರ ದಿನದಂದು ಎಲ್ಲ ವೈದ್ಯರಿಗೆ ಒಂದು ಹೃತ್ಪೂರ್ವಕ ಧನ್ಯವಾದ ಹೇಳೋಣ ಎಂದು ಟ್ವೀಟ್ ಮಾಡಿದ್ದಾರೆ.

ಕೆ ಸುಧಾಕರ್ ಅವರು, ಇತ್ತೀಚೆಗಷ್ಟೇ ಹೋಮ್ ಕ್ವಾರಂಟೈನ್ ಮುಕ್ತಾಯಗೊಳಿಸಿ ಕರ್ತವ್ಯಕ್ಕೆ ವಾಪಸ್ ಆಗಿದ್ದಾರೆ. ಸುಧಾಕರ್ ಅವರ ಕುಟುಂಬಸ್ಥರಿಗೆ ಕೊರೋನಾ ಸೋಂಕು ಕಂಡುಬಂದಿತ್ತು. ಹೀಗಾಗಿ ಸುಧಾಕರ್ ಅವರು ಸ್ವಯಂ ನಿರ್ಬಂಧಕ್ಕೊಳಗಾಗಿದ್ದರು. ಸತತ ಐದು ದಿನಗಳ ಬಳಿಕ ಮತ್ತೆ ಕೋವಿಡ್-19 ಟೆಸ್ಟ್ ಒಳಗಾಗಿದ್ದ ಅವರ 2 ವರದಿಗಳು ನೆಗೆಟಿವ್ ಬಂದಿತ್ತು. ಹೀಗಾಗಿ ಸುಧಾಕರ್ ಅವರು ಮತ್ತೆ ಕರ್ತವ್ಯಕ್ಕೆ ವಾಪಸ್ ಆಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಅಮೆರಿಕ ಶಕ್ತಿ ಕೇಂದ್ರ ಶ್ವೇತಭವನ ಬಳಿ ಇಬ್ಬರು ಯುಎಸ್ ರಾಷ್ಟ್ರೀಯ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ: ಶಂಕಿತನ ಗುರುತು ಪತ್ತೆ

ಕಾಂಗ್ರೆಸ್ ಸರ್ಕಾರ ಪತನಗೊಂಡರೆ, ಡಿಕೆಶಿಗೆ ಬೆಂಬಲ ಕೊಡಲು BJP ಸಿದ್ಧ: ಡಿ.ವಿ.ಸದಾನಂದ ಗೌಡ

SIR ಒತ್ತಡ: ಮದುವೆಗೆ ಒಂದು ದಿನ ಮೊದಲು ಆತ್ಮಹತ್ಯೆಗೆ ಶರಣಾದ ಯುಪಿ ಸಿಬ್ಬಂದಿ!

SCROLL FOR NEXT