ಕೋವಿಡ್-19 ಸ್ಮಶಾನ ಭೂಮಿ ಗುರುತು ಮಾಡಲು ಸಮೀಕ್ಷೆ ಪ್ರಾರಂಭ 
ರಾಜ್ಯ

ಕೋವಿಡ್-19 ಸ್ಮಶಾನ ಭೂಮಿ ಗುರುತು ಮಾಡಲು ಸಮೀಕ್ಷೆ ಪ್ರಾರಂಭ

ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಬೆಂಗಳೂರಿನಿಂದ ಹೊರವಲಯದಲ್ಲಿ ಸರ್ಕಾರ 35.18 ಎಕರೆ ಪ್ರದೇಶವನ್ನು ಗುರುತು ಮಾಡುವ ಪ್ರಕ್ರಿಯೆಯಲ್ಲಿದೆ. 

ಬೆಂಗಳೂರು: ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಬೆಂಗಳೂರಿನಿಂದ ಹೊರವಲಯದಲ್ಲಿ ಸರ್ಕಾರ 35.18 ಎಕರೆ ಪ್ರದೇಶವನ್ನು ಗುರುತು ಮಾಡುವ ಪ್ರಕ್ರಿಯೆಯಲ್ಲಿದೆ. 

ನಗರದ ಒಳಭಾಗದಲ್ಲಿರುವ ಸ್ಮಶಾನಗಳಲ್ಲಿ ಕೋವಿಡ್-19 ಮೃತರ ಅಂತ್ಯಸಂಸ್ಕಾರ ನಡೆಸಲು ವಿರೋಧ ವ್ಯಕ್ತವಾಗುತ್ತಿದ್ದು, ಅಂತ್ಯಕ್ರಿಯೆಗೆ ಜಾಗದ ಕೊರತೆ ಎದುರಾಗಿರುವುದರಿಂದ ಸರ್ಕಾರ ಹೊಸದಾಗಿ ಕೋವಿಡ್-19 ಸ್ಮಶಾನ ಭೂಮಿ ಗುರುತಿಸುವ ಕೆಲಸಕ್ಕೆ ಮುಂದಾಗಿದೆ. 

ಈ ಪೈಕಿ ದೀರ್ಘಾವಧಿಯಿಂದ ಯಲಹಂಕಾದಲ್ಲಿ ಹೊರವರ್ತುಲ ರಸ್ತೆಗಾಗಿ ರೂಪಿಸಲಾಗಿದ್ದ ಎರಡು ಎಕರೆ ಪ್ರದೇಶವನ್ನು ಕೈಬಿಡಲಾಗಿದೆ. 35.18 ಎಕರೆಯಷ್ಟು ಜಾಗವನ್ನು ಪಟ್ಟಿ ಮಾಡಿದ್ದ ಸರ್ಕಾರಿ ಆದೇಶ ಜು.02 ರಂದೇ ಹೊರಬಿದ್ದಿತ್ತು. ಆದರೆ ತಕ್ಷಣವೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಅಧಿಕೃತವಲ್ಲ ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಿದೆ. 

ಸ್ಮಶಾನಕ್ಕಾಗಿ ಗುರುತು ಮಾಡಿರುವ ಪ್ರದೇಶಗಳು ಎಲ್ಲಿವೆ?

ಬೆಂಗಳೂರು ಉತ್ತರದಲ್ಲಿ 4 ಎಕರೆ, ಬೆಂಗಳೂರು ದಕ್ಷಿಣದಲ್ಲಿ 10 ಎಕರೆ, ಆನೇಕಲ್ ನಲ್ಲಿ 3 ಎಕರೆ, ಯಲಹಂಕಾದಲ್ಲಿ 12 ಎಕರೆಗಳನ್ನು ಗುರುತು ಮಾಡಲಾಗಿದೆ, ಬೆಂಗಳೂರು ಪೂರ್ವದಲ್ಲಿ ಯಾವುದೇ ಜಾಗವನ್ನೂ ಗುರುತು ಮಾಡಿಲ್ಲ. ಬೆಂಗಳೂರು ನಗರ ಪ್ರದೇಶದಲ್ಲಿ ಕೋವಿಡ್-19 ನಿಂದ ಮೃತಪಟ್ಟವರಿಗೆ ಅಂತ್ಯಸಂಸ್ಕಾರ ನಡೆಸಲು ಜಾಗದ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ, ನಗರದ ಹೊರವಲಯದಲ್ಲಿ ಭೂಮಿ ಮಂಜೂರು ಮಾಡಲು ಬಿಬಿಎಂಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.

ಬೆಂಗಳೂರು ನಗರದ ವಿಸ್ತರಣೆಗಾಗಿ, ವಾಣಿಜ್ಯ ಚಟುವಟಿಕೆಗಳಿಗಾಗಿ, ಕೈಗಾರೀಕರಣ ಹಾಗೂ ಟೌನ್ ಶಿಪ್ ನ ಅಭಿವೃದ್ಧಿಗಾಗಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಜಾಗಗಳನ್ನು ಖಾಲಿ ಬಿಡಲಾಗಿತ್ತು. ಆದರೆ ಈಗ ಕೋವಿಡ್-19 ಪರಿಸ್ಥಿತಿಯಿಂದಾಗಿ ಈ ಖಾಲಿ ಉಳಿದ ಪ್ರದೇಶಗಳನ್ನು ಸ್ಮಶಾನ ಭೂಮಿಗಾಗಿ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀರೂಪ ಇದರ ಬಗ್ಗೆ ಮಾಹಿತಿ ನೀಡಿದ್ದು, ಪಟ್ಟಿ ಮಾಡಲಾದ ಭೂಮಿಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಭೂಮಿಯನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎರಡನೇ ಬಾರಿಗೆ ಭೇಟಿ: ಸತೀಶ್ ಜಾರಕಿಹೊಳಿ ಬಳಿ ಬೆಂಬಲ ಕೇಳಿದ್ರಾ ಡಿಕೆ ಶಿವಕುಮಾರ್!

ರಾಹುಲ್ ಗಾಂಧಿ ಅಥವಾ ಖರ್ಗೆ ಅಲ್ಲ; ಪುಟಿನ್ ಜೊತೆಗಿನ ಭೋಜನಕೂಟಕ್ಕೆ ಕಾಂಗ್ರೆಸ್ ನ ಈ ನಾಯಕನಿಗೆ ಮಾತ್ರ ಆಹ್ವಾನ!

ಅಬಕಾರಿ ಇಲಾಖೆಗೆ 43,000 ಕೋಟಿ ರೂ ತೆರಿಗೆ ಸಂಗ್ರಹದ ಗುರಿ! ವಾಣಿಜ್ಯ ಇಲಾಖೆಗೆ 'ಟಾರ್ಗೆಟ್' ಎಷ್ಟು?

‘ಡೆವಿಲ್': ನಾಳೆ ಮಧ್ಯಾಹ್ನ 1:05 ರಿಂದ ಅಡ್ವಾನ್ಸ್ ಬುಕ್ಕಿಂಗ್ ಓಪನ್ಸ್‌ ! ಈಗಿನಿಂದಲೇ ಅಭಿಮಾನಿಗಳ ಭರ್ಜರಿ ಸಿದ್ಧತೆ, Video

ಪಾಕಿಸ್ತಾದ 'ನ್ಯೂಕ್ಲಿಯರ್ ಬಟನ್' ಈಗ ಅಸಿಮ್ ಮುನೀರ್ ಕೈಯಲ್ಲಿ! ಭಾರತದ ವಿರುದ್ಧ ಸೇಡಿಗೆ ಮುಂದಾಗ್ತಾರಾ?

SCROLL FOR NEXT