ಹಂಪಿಗೆ ಕಾಲೇಜಿನಿಂದ ಪ್ರವಾಸ ಹೋಗಿದ್ದ ವಿದ್ಯಾರ್ಥಿಗಳು(ಸಂಗ್ರಹ ಚಿತ್ರ) 
ರಾಜ್ಯ

ಕೋವಿಡ್-19 ಸಮಯದಲ್ಲಿ ಪ್ರವಾಸ ಹೋಗಲು ಸಾಧ್ಯವಾಗುತ್ತಿಲ್ಲವೇ? ಸರ್ಕಾರ ಒದಗಿಸುತ್ತಿದೆ ವರ್ಚುವಲ್ ಟೂರಿಸಂ!

ಕೋವಿಡ್-19 ಸಮಯದಲ್ಲಿ ಈ ಬಾರಿ ಹಲವರಿಗೆ ತಮ್ಮ ಇಷ್ಟದ ಸ್ಥಳಗಳಿಗೆ ಹೋಗಲು ಸಾಧ್ಯವಾಗದಿರಬಹುದು. ಪ್ರವಾಸೋದ್ಯಮಕ್ಕೆ ಇದರಿಂದ ಭಾರೀ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪ್ರವಾಸಿ ಪ್ರಿಯರಿಗೆ ದೇವಸ್ಥಾನಗಳು, ಸ್ಮಾರಕಗಳು, ಜಲಪಾತಗಳ ವರ್ಚುವಲ್ ಪ್ರವಾಸ ಸೌಲಭ್ಯವನ್ನು ಕಲ್ಪಿಸಿಕೊಡಲಿದೆ.

ಹುಬ್ಬಳ್ಳಿ: ಕೋವಿಡ್-19 ಸಮಯದಲ್ಲಿ ಈ ಬಾರಿ ಹಲವರಿಗೆ ತಮ್ಮ ಇಷ್ಟದ ಸ್ಥಳಗಳಿಗೆ ಹೋಗಲು ಸಾಧ್ಯವಾಗದಿರಬಹುದು. ಪ್ರವಾಸೋದ್ಯಮಕ್ಕೆ ಇದರಿಂದ ಭಾರೀ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪ್ರವಾಸಿ ಪ್ರಿಯರಿಗೆ ದೇವಸ್ಥಾನಗಳು, ಸ್ಮಾರಕಗಳು, ಜಲಪಾತಗಳ ವರ್ಚುವಲ್ ಪ್ರವಾಸ ಸೌಲಭ್ಯವನ್ನು ಕಲ್ಪಿಸಿಕೊಡಲಿದೆ.

ಪ್ರವಾಸೋದ್ಯಮವನ್ನು ಉತ್ತೇಜಿಸಲು 360 ಡಿಗ್ರಿ ಫೋಟೋಗ್ರಾಫ್ಸ್ ನಲ್ಲಿ ಸ್ಮಾರಕಗಳು, ದೇವಸ್ಥಾನಗಳು ಮತ್ತು ಇತರ ಸ್ಥಳಗಳಿಗೆ ವರ್ಚುವಲ್ ಟೂರ್ ಮಾಡಿಸಲಿದೆ. ಡ್ರೋನ್ ವಿಡಿಯೊ ಸಹಾಯವನ್ನು ಪಡೆಯಲಿದ್ದಾರೆ. ಹಂಪಿಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು ಇಲ್ಲಿನ ಸ್ಮಾರಕಗಳ ಫೋಟೋಗ್ರಫಿ ಮತ್ತು ವಿಡಿಯೊಗ್ರಫಿ ಪ್ರಕ್ರಿಯೆ ನಡೆಯುತ್ತಿದೆ.

ಈ ಸಂಬಂಧ ಪ್ರವಾಸೋದ್ಯಮ ಮತ್ತು ಎಎಸ್ಐ ಅಧಿಕಾರಿಗಳ ನಡುವೆ ಕಳೆದ ವಾರ ಸಭೆ ನಡೆದಿತ್ತು. ಅದರಲ್ಲಿ ಇಂಟರ್ನೆಟ್ ನಲ್ಲಿ ಪ್ರವಾಸಿಪ್ರಿಯರಿಗೆ ಕರ್ನಾಟಕದ ಪರಂಪರೆಯನ್ನು ತೋರಿಸುವುದೆಂದು ನಿರ್ಧರಿಸಲಾಯಿತು. ಸ್ಮಾರಕಗಳ ದಾಖಲೆಗೆ ಅತಿ ಉನ್ನತ ಗುಣಮಟ್ಟದ ಸಾಧನಗಳನ್ನು ಬಳಸಲಾಗುತ್ತಿದ್ದು ಹಂಪಿಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು.

ಸ್ಮಾರಕಗಳು, ಪಾರಂಪರಿಕ ಸ್ಥಳಗಳ ನಂತರ ಜಲಪಾತಗಳ ವರ್ಚುವಲ್ ಟೂರ್ ಮಾಡಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಪಶ್ಚಿಮ ಘಟ್ಟಗಳು ಮತ್ತು ಕ್ಯಾಸ್ಕೇಡ್ ಗಳ ವರ್ಚುವಲ್ ಟೂರ್ ನ್ನು ಸಹ ಮಾಡಿಸಲಿದೆ. ಅವು ಇನ್ನೂ ಆರಂಭಿಕ ಹಂತಗಳಲ್ಲಿದೆ. ಸದ್ಯ ಹಂಪಿ, ಗೋಲ ಗುಂಬಜ್, ಬೇಲೂರು ಮತ್ತು ಹಳೆಬೀಡು ಮತ್ತು ಇತರ ಸ್ಮಾರಕಗಳ ವರ್ಚುವಲ್ ಟೂರ್ ಮಾಡಿಸಲಾಗುತ್ತದೆ.

ಹಂಪಿಯ ಸ್ಮಾರಕಗಳನ್ನು 3ಡಿಯಲ್ಲಿ ಕೆಲ ವರ್ಷಗಳ ಹಿಂದೆ ಮಾಡಲಾಗಿತ್ತು. ಇನ್ನು ಹೊಸ ವರ್ಚುವಲ್ ಪ್ರವಾಸೋದ್ಯಮಕ್ಕೆ ಸ್ಮಾರಕಗಳನ್ನು ದಾಖಲೆ ಮಾಡಲಾಗುತ್ತದೆ. ವಿಡಿಯೊ ಮತ್ತು ಫೋಟೋಗಳು ಸಿದ್ದವಾಗಿದ್ದು ಸರ್ಕಾರದಿಂದ ಅನುಮತಿ ಸಿಗಬೇಕಿದೆ. ಹಂಪಿಗೆ ಹೋಗಿ ಖುದ್ದಾಗಿ ನೋಡಿದಷ್ಟು ಇಂಟರ್ನೆಟ್ ನಲ್ಲಿ ನೋಡಿದರೆ ಖುಷಿ ಸಿಗಲಿಕ್ಕಿಲ್ಲ, ಆದರೂ ಪ್ರವಾಸಿಗರಲ್ಲಿ ಕೌತುಕ ಹುಟ್ಟಿಸಲು ಸಹಾಯವಾಗಬಹುದು ಎಂದು ಹಂಪಿ ಸ್ಮಾರಕ ನಿರ್ವಹಣೆ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT