ರಾಜ್ಯ

ಕೊರೋನಾ ಭೀತಿ: ಪತ್ನಿಯನ್ನು ಮನೆಗೆ ಸೇರಿಸದೇ ಪರಾರಿಯಾದ ಪತಿ!

Nagaraja AB

ಬೆಂಗಳೂರು: ಲಾಕ್ ಡೌನ್ ನಿಂದಾಗಿ ಕಳೆದ ಮೂರು ತಿಂಗಳಿನಿಂದ ತವರು ಮನೆಯಲ್ಲಿದ್ದ ಪತ್ನಿಯನ್ನು ವಾಪಸ್ಸು‌ ಮನೆಗೆ ಸೇರಿಸಿಕೊಳ್ಳದೆ ಆಕೆ ಬಂದಾಗ ಬಾಗಿಲು ಹಾಕಿ ಪತಿ ಪರಾರಿಯಾಗಿರುವ  ಘಟನೆ  ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲಾಕ್‍ಡೌನ್  ನಿಂದಾಗಿ‌ ಮಹಿಳೆ ಚಂಡೀಗಢದಲ್ಲಿದ್ದ ತಮ್ಮ ತವರು ಮನೆಯಲ್ಲಿ ಉಳಿದುಕೊಂಡಿದ್ದರು.ಇತ್ತ ಸಿಲಿಕಾನ್ ಸಿಟಿಯಲ್ಲಿ ಅವರ ಪತಿ, 10 ವರ್ಷದ ಪುತ್ರನೊಂದಿಗಿದ್ದರು.

ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಮಹಿಳೆ ಚಂಡೀಗಢದಿಂದ ಬೆಂಗಳೂರಿಗೆ ಬಂದಿದ್ದರು. ಆದರೆ, ಮನೆಗೆ ಮಹಿಳೆ ತಲುಪುತ್ತಿದ್ದಂತೆ  ಪತಿ ಬಾಗಿಲು ತೆಗೆಯದೇ ಅವರನ್ನು ಮನೆಯ ಹೊರಗೆ  ನಿಲ್ಲಿಸಿದ್ದಾರೆ.

SCROLL FOR NEXT