ಮೊಬೈಲ್ ಲ್ಯಾಬ್ 
ರಾಜ್ಯ

ಮನೆ ಬಾಗಿಲಲ್ಲಿ ಕೋವಿಡ್-19 ಟೆಸ್ಟಿಂಗ್ ಗಾಗಿ ಮೊಬೈಲ್ ಲ್ಯಾಬ್: ಕೆಲಸ ನಿರ್ವಹಿಸದ ಸಹಾಯವಾಣಿ

ಲಾಕ್ ಡೌನ್ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹಿರಿಯ ನಾಗರೀಕರು, ಕೋ-ಮೋರ್ಬಿಡ್ ಅಸ್ವಸ್ಥರು, ರೋಗಲಕ್ಷಣ ಇರುವ ಪ್ರಾಥಮಿಕ ಸಂಪರ್ಕದವರು ತಮ್ಮ ವಲಯದಲ್ಲಿ ಕಾರ್ಯವಹಿಸುವ ಮೊಬೈಲ್ ಟೆಸ್ಟಿಂಗ್ ವಾಹನಕ್ಕೆ ಕರೆ ಮಾಡಿ ಮನೆ ಬಾಗಿಲಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು. 

ಬೆಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹಿರಿಯ ನಾಗರೀಕರು, ಕೋ-ಮೋರ್ಬಿಡ್ ಅಸ್ವಸ್ಥರು, ರೋಗಲಕ್ಷಣ ಇರುವ ಪ್ರಾಥಮಿಕ ಸಂಪರ್ಕದವರು ತಮ್ಮ ವಲಯದಲ್ಲಿ ಕಾರ್ಯವಹಿಸುವ ಮೊಬೈಲ್ ಟೆಸ್ಟಿಂಗ್ ವಾಹನಕ್ಕೆ ಕರೆ ಮಾಡಿ ಮನೆ ಬಾಗಿಲಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು. 

ಹೀಗಾಗಿ ವಲಯವಾರು ಸಹಾಯವಾಣಿ ಸ್ಥಾಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಕೋರಿದೆ. 

ವಲಯವಾರು ಸಹಾಯವಾಣಿ ಸಂಖ್ಯೆಗಳು : 
ಯಲಹಂಕ- 080-28560696/ 8792032820/5180 
ಮಹದೇವಪುರ- 080-23010101/102, 
ಬೊಮ್ಮನಹಳ್ಳಿ- 8548883334/ 897000222‌8,  
ಆರ್ ಆರ್ ನಗರ- 080-2600208 
ದಕ್ಷಿಣ ವಲಯ- 7022724772, 
ಪೂರ್ವ ವಲಯ -9900094042, 
ಪಶ್ಚಿಮ ವಲಯ 080-68248454/ 7204179723 

ಮನೆಯಲ್ಲಿಯೇ ಪ್ರತ್ಯೇಕತೆ ಕಾಪಾಡಿಕೊಂಡು ಕೋವಿಡ್ ಸೋಂಕು ಹರಡದಂತೆ ಎಚ್ಚರಿಕೆವಹಿಸಬೇಕು.ಮುಂಜಾಗ್ರತಾ ಕ್ರಮವಾಗಿ ಗಂಟಲು ದ್ರವ( ಸ್ವ್ಯಾಬ್) ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಯಾವುದೇ ವ್ಯಕ್ತಿ ಫಲಿತಾಂಶ ಲಭ್ಯವಾಗುವವರೆಗೆ ಮನೆ ಯಲ್ಲೇ ಪ್ರತ್ಯೇಕತೆ (ಐಸೋಲೇಷನ್) ಅನ್ನು ಕಾಯ್ದುಕೊಳ್ಳಬೇಕು.ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅವರಿಗೆ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು.

ಆಪ್ತಮಿತ್ರ-ಕೋವಿಡ್- 19 ಸಹಾಯವಾಣಿ, ಟೆಲಿಮೆಡಿಸಿನ್ ಮತ್ತು ಆಸ್ಪತ್ರೆಗೆ ಉಲ್ಲೇಖಿಸಲು-14410, ಆಂಬುಲೆನ್ಸ್ ಸೇವೆಗೆ -108 ,ಆಸ್ಪತ್ರೆ ನಿರಾಕರಣೆ ಸಂಬಂಧದ ಕೊಂದು ಕೊರತೆಗಾಗಿ-1912, ಸಾಮಾನ್ಯ ಆರೋಗ್ಯ ಸಮಸ್ಯೆ ಕುರಿತ ಮಾಹಿತಿಗಾಗಿ -104 ಸಂಖ್ಯೆಗಳಿಗೆ ಸಾರ್ವಜನಿಕರು ಕರೆ ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

ಆದರೆ ನಗರದ ಕೆಲವು ಭಾಗಗಳಲ್ಲಿ ಸಹಾಯವಾಣಿಗೆ,ಆ್ಯಂಬುಲೆನ್ಸ್ ಗಳಿಗೆ,ಆರೋಗ್ಯಾಧಿಕಾರಿಗಳಿಗೆ ಶಂಕಿತ ಸೋಂಕಿತರು ಕರೆ ಮಾಡಿದರೂ ಇಲಾಖೆ ಅಧಿಕಾರಿಗಳಾಗಲೀ,ಆ್ಯಂಬುಲೆನ್ಸ್ ಗಳಾಗಲೀ ಬರುತ್ತಿಲ್ಲವೆಂಬ ಆರೋಪವಿದೆ.ಸಹಾಯವಾಣಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT