ತುಂಬಿದ ಕೆರೆ 
ರಾಜ್ಯ

ವರುಣದೇವನ ಕೃಪೆ: ರಾತ್ರೋ ರಾತ್ರಿ ಸುರಿದ ಭಾರೀ ಮಳೆಯಿಂದ ತುಂಬಿತು ರೈತನ ಕೆರೆ!

ಭಾನುವಾರ ರಾತ್ರಿ ಮಧುಗಿರಿ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಮಾವಿನ ಕೃಷಿಕ ಅಂಜಿನಪ್ಪ ಅವರ ಭವಿಷ್ಯವೇ ಬದಲಾಯಿತು.

ತುಮಕೂರು: ಭಾನುವಾರ ರಾತ್ರಿ ಮಧುಗಿರಿ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಮಾವಿನ ಕೃಷಿಕ ಅಂಜಿನಪ್ಪ ಅವರ ಭವಿಷ್ಯವೇ ಬದಲಾಯಿತು. 

1 ಕೋಟಿ ಲೀಟರ್ ಸಾಮರ್ಥ್ಯದ ಅವರ ಬೃಹತ್ ಕೃಷಿ ಕೊಳವು ತುಂಬಿದೆ, , ಬೆಂಗಳೂರು ಗ್ರಾಮೀಣ ಜಿಲ್ಲೆಯ ದೇವನಹಳ್ಳಿ ಮೂಲದ ಬಿ.ಇ (ಸಿವಿಲ್) ಎಂಜಿನೀಯರ್ ಅಂಜಿನಪ್ಪ ಹಲವು ವರ್ಷಗಳ ಹಿಂದೆ ಕೆರೆ ನಿರ್ಮಿಸಿದ್ದರು.  ಅವರು ಕೊರೆಸಿದ್ದ ಮೂರು ಬೋರ್ ವೆಲ್ ಗಳ ನೀರು ಬತ್ತಿ ಹೋದ ಹಿನ್ನೆಲೆಯಲ್ಲಿ ತಮ್ಮ 40 ಎಕರೆ ಮಾವಿನ ತೋಟಕ್ಕಾಗಿ ಕೆರೆ ನಿರ್ಮಿಸಿದ್ದರು.

ತೋಟಗಾರಿಕೆ ಇಲಾಖೆಯ 5,5 ಲಕ್ಷ ಸಬ್ಸಿಡಿಯೊಂದಿಗೆ ಒಟ್ಟು 13 ಲಕ್ಷ ರು ಹಣ ಖರ್ಚು ಮಾಡಿ ಕೆರೆ ನಿರ್ಮಿಸಿದ್ದರು. 180*180  ಅಡಿ ವಿಸ್ತೀರ್ಣವಾದ ಕೆರೆಯು 15 ಅಡಿ ಆಳವಿದ್ದು 1 ಕೋಟಿ ಲೀಟರ್ ನೀರು ತುಂಬಿಸುವ ಸಾಮರ್ಥ್ಯವಿದೆ. 

ಕೆರೆ ತುಂಬಿರುವುದಕ್ಕೆ ಆಂಜಿನಪ್ಪ ಸಂತಸ ವ್ಯಕ್ತ ಪಡಿಸಿದ್ದಾರೆ,  ಕೆರೆ ತುಂಬಿರುವುದರಿಂದ ನನ್ನ ಮೂರು ಬೋರ್ ವೆಲ್ ಗಳಿಗೆ ನೀರು ಮತ್ತೆ ಬರುವುದರ ಜೊತೆಗೆ ನನ್ನ 4 ಸಾವಿರ ಮಾವಿನ ಮರಗಳಿಗೆ ಸಂತುಷ್ಟಿಯಾಗಿ ನೀರು ಸಿಗಲಿದೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.

ರೈತರು ತಮ್ಮ ಜಮೀನಿನಲ್ಲಿ ಕೆರೆ ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ,  ಕೆಲವು ವರ್ಷಗಳ ಹಿಂದೆ ತೋಟಗಾರಿಕೆ ಇಲಾಖೆಯು ಮಾವಿನಕಾಯಿ ಪ್ರವಾಸೋದ್ಯಮಕ್ಕಾಗಿ ಆತನ ಜಮೀನನ್ನು ಆರಿಸಿಕೊಂಡಿತು.

ಈ ಬಾರಿ, ಕೋವಿಡ್ -19 ಪರಿಸ್ಥಿತಿಯಿಂದಾಗಿ (ಮಾವಿನಕಾಯಿ ಪ್ರವಾಸೋದ್ಯಮ) ಸಾಧ್ಯವಾಗಲಿಲ್ಲ, ಆದರೆ ನಾನು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಬಾಗಿಲಿಗೆ ಮಾವಿನ ಹಣ್ಣು ತಲುಪಿಸಲು ಸಾಧ್ಯವಾಯಿತು ಆದರೆ ಯಾವುದೇ ನಷ್ಟ ಅನುಭವಿಸಲಿಲ್ಲ" ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ದಾಖಲೆ ಪ್ರಮಾಣದ 24 ಮಿಮಿ ಮಳೆಯಾಗಿದ್ದು, ಕುಣಿಗಲ್ ನಲ್ಲಿ 43ಮಿಮಿ, ಕೊರಟಗೆರೆ 40ಮಿಮಿ ಮತ್ತು ಮಧುಗಿರಿಯಲ್ಲಿ 35ಮಿಮಿ ಮಳೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT