ಕೊರೋನಾ ವೈರಸ್ ಮಾದರಿ ಸಂಗ್ರಹ (ಸಂಗ್ರಹ ಚಿತ್ರ) 
ರಾಜ್ಯ

ಕರ್ನಾಟಕದಲ್ಲಿ ಕೊರೋನಾ ವೈರಸ್ ನ ಆರು ಪ್ರಭೇದಗಳು ಪತ್ತೆ

ಕರ್ನಾಟಕದಲ್ಲಿ ಕೋವಿಡ್ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ವಿವಿಧ ಪ್ರಕಾರಗಳ ಕೊರೋನಾ ವೈರಾಣು ಇರುವುದನ್ನು ಅಲ್ಲಗಳೆಯುತ್ತಿದ್ದರೂ ಬೆಂಗಳೂರಿನಲ್ಲಿ ನಡೆದ ಅಧ್ಯಯನವೊಂದು ಇದಕ್ಕೆ ತದ್ವಿರುದ್ಧವಾದ ವರದಿಯನ್ನು ನೀಡಿದೆ. 

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ವಿವಿಧ ಪ್ರಕಾರಗಳ ಕೊರೋನಾ ವೈರಾಣು ಇರುವುದನ್ನು ಅಲ್ಲಗಳೆಯುತ್ತಿದ್ದರೂ ಬೆಂಗಳೂರಿನಲ್ಲಿ ನಡೆದ ಅಧ್ಯಯನವೊಂದು ಇದಕ್ಕೆ ತದ್ವಿರುದ್ಧವಾದ ವರದಿಯನ್ನು ನೀಡಿದೆ. 

ಜೂ.1 ವರೆಗೆ ಸತತ ಮೂರು ತಿಂಗಳುಗಳ ಕಾಲ ಬೆಂಗಳೂರು ಮೂಲದ ನಿಮ್ಹಾನ್ಸ್ ನ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಈಗಾಗಲೇ SARS-CoV-2 ನ ಅಭಿವೃದ್ಧಿ ಹೊಂದಿದ 6 ಪ್ರಭೇದಗಳು (ತಳಿಗಳು) ಪತ್ತೆಯಾಗಿವೆ. ಮುಂದವರೆದು ಈ ವೈರಾಣುವಿನ ಇನ್ನೂ ಹಲವು ಸ್ಟ್ರೈನ್ ಗಳು ಇರುವ ಸಾಧ್ಯತೆಗಳಿದ್ದು, ಚಿಕಿತ್ಸೆಯಲ್ಲಿ ಅಡ್ಡಿಯಾಗುತ್ತಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ನಿಮ್ಹಾನ್ಸ್ (NIMHANS) ನ ನ್ಯೂರೋವೈರಾಲಜಿ ವಿಭಾಗದಲ್ಲಿ ವೈರಾಣುವಿನ ಜೆನೆಟಿಕ್ ಸೀಕ್ವೆನ್ಸಿಂಗ್ (ವಂಶವಾಹಿಳ ಗುಚ್ಛದ ಅನುಕ್ರಮವನ್ನು ಡಿಕೋಡ್ ಮಾಡುವುದು) ನಡೆಸಲಾಗಿದೆ. 8 ಜಿಲ್ಲೆಗಳಲ್ಲಿ ರೋಗಿಗಳಿಂದ ಸಂಗ್ರಹಿಸಲಾದ ಮಾದರಿಯಿಂದ ವೈರಾಣುವಿನ ಜಿನೋಮ್ ಅಧ್ಯಯನ ನಡೆಸಲಾಗಿದ್ದು, ಮುಖ್ಯವಾಗಿ B6, B1 ಪ್ರಭೇದದ ವೈರಾಣುಗಳು ಕಂಡುಬಂದಿವೆ. 
ನಿಮ್ಹಾನ್ಸ್ ನ ನ್ಯೂರೋವೈರಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಡಾ.ವಿ. ರವಿ ಅವರು ನೀಡಿರುವ ಮಾಹಿತಿಯ ಪ್ರಕಾರ,  SARS-CoV-2  ವೈರಸ್ ನ 47 ಪೂರ್ಣ ಜಿನೋಮ್ ನ್ನು ಅಧ್ಯಯನ ಮಾಡಲಾಗಿದೆ.

ಈ ಪೈಕಿ ಕಂಡುಬಂದಿರುವ B1  ಯುರೋಪಿನಲ್ಲಿ ವರದಿಯಾಗಿರುವುದಾಗಿದ್ದು,  B6 ಫಿಲಿಪೈನ್ಸ್, ಬ್ರಿಟನ್, ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಸಿಂಗಪೂರ್, ಭಾರತದಲ್ಲಿ ಹೆಚ್ಚು ವರದಿಯಾಗಿದೆ. ಮಾ.5 ರಿಂದ ಜೂ.1 ರ ವರೆಗೆ ಬೆಂಗಳೂರು ನಗರ, ಗ್ರಾಮೀಣ, ಬೆಳಗಾವಿ, ಬೀದರ್, ಬಿಜಾಪುರ, ಮೈಸೂರು, ದಾವಣಗೆರೆ, ಬಾಗಲಕೋಟೆಗಳ ರೋಗಿಗಳ ಮಾದರಿಯ ಸಂಗ್ರಹದಿಂದ ನಡೆದಿರುವ ಅಧ್ಯಯನ ವರದಿಗಳು ಇವಾಗಿವೆ.

ರೋಗ ತಡೆ ಜನರ ಮೇಲೆಯೇ ಅವಲಂಬಿತವಾಗಿದ್ದು, ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ನಿರ್ಧಾರವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT