ರಾಜ್ಯ

ಸ್ಪೀಕರ್ ಕಾಗೇರಿ ಖಾಸಗಿ ಕಾರ್ಯದರ್ಶಿಗೂ ಕೊರೋನಾ ಪಾಸಿಟಿವ್

Shilpa D

ಬೆಂಗಳೂರು:ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕಾಂಗ ಸಭೆಯ ಎಲ್ಲಾ ಸಭೆಗಳನ್ನು ರದ್ದುಗೊಳಿಸುವಂತೆ ಆದೇಶ ಹೊರಡಿಸಿದ್ದರು, ಆದರೆ ಅವರ ಖಾಸಗಿ ಕಾರ್ಯದರ್ಶಿ ಅಮರ್ ನಾಥ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಅಮರ್ ನಾಥ್ ಅವರ ಕಚೇರಿ ಸೀಲ್ ಡೌನ್ ಮಾಡಲಾಗಿದ್ದು ಸ್ಯಾನಿಟೈಸ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ, ಅಮರ್ ನಾಥ್ ಅವರಿಗೆ ಕೊರೋನಾ ದೃಢಪಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಶಕ್ತಿ ಸೌಧಕ್ಕೆ ಕೊರೋನಾ ಕಾಡುತ್ತಲೇ ಇದೆ.ಶಾಸಕರ ಭವನ ಮತ್ತು ವಿಧಾನ ಸೌಧದ 20 ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.

SCROLL FOR NEXT