ಜಿಪಿಒ -ಬೆಂಗಳೂರು 
ರಾಜ್ಯ

ಪೋಸ್ಟ್ ಮ್ಯಾನ್ ಗೆ ಕೊರೋನಾ ಸೋಂಕು: ಮೂರು ದಿನಗಳ ಕಾಲ ಜಿಪಿಓ ಬಂದ್

ಮನೆ ಮನೆಗೆ ತೆರಳುವ ಪೋಸ್ಟ್ ಮ್ಯಾನ್  ಕೊರೋನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಪ್ರಧಾನ ಅಂಚೆ ಕಚೇರಿಯನ್ನು ಮುಚ್ಚಲಾಗಿದೆ.

ಬೆಂಗಳೂರು: ಮನೆ ಮನೆಗೆ ತೆರಳುವ ಪೋಸ್ಟ್ ಮ್ಯಾನ್  ಕೊರೋನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಪ್ರಧಾನ ಅಂಚೆ ಕಚೇರಿಯನ್ನು ಮುಚ್ಚಲಾಗಿದೆ.

ಬೆಂಗಳೂರಿನ ಎಲ್ಲಾ ಅಂಚೆ ಕಚೇರಿಗಳಲ್ಲಿ ಅತ್ಯಂತ ಬ್ಯುಸಿ ಇರುವುದು ಜಿಪಿಒ ಇಲ್ಲಿ ಪ್ರತಿದಿನ ಸರಾಸರಿ 5,000 ಸ್ಪೀಡ್ ಪೋಸ್ಟ್ ಲೇಖನಗಳು, 3,000 ನೋಂದಾಯಿತ ವಸ್ತುಗಳು ಮತ್ತು 550 ಪಾರ್ಸೆಲ್‌ಗಳನ್ನು ಪ್ರತಿದಿನ ವಿಲೇವಾರಿಯಾಗುತ್ತದೆ.

ನಗರದಲ್ಲಿ ನಾಲ್ಕು ಅಂಚೆ ಕಚೇರಿಗಳಿದ್ದು, ರಾಜ ರಾಜೇಶ್ವರಿ ನಗರ, ಶಿವರಾಮ ಕಾರಂತ್ ನಗರ, ದೀಪಾಂಜಲಿ ನಗರ ಮತ್ತು ಬೋಲಾರ ದಲ್ಲಿ ಶಾಖೆಗಳಿವೆ, ಈ ಎಲ್ಲಾ ಶಾಖೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

ಮಂಗಳವಾರ ಬೆಳಗ್ಗೆಯಿಂದಲೇ ಡೆಲಿವರಿ ವಿಭಾಗದ ಕಚೇರಿಯನ್ನು ಬಂದ್ ಮಾಡಿರುವುದಾಗಿ ಬೆಂಗಳೂರು ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಮತ್ತೆ ಅಂಚೆ ಕಚೇರಿ ತೆರೆಯುವ ಸಾಧ್ಯತೆಯಿದೆ, ಜಿಪಿಒನ ಇತರ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.  ವಿಧಾನ ಸೌಧ, ಇನ್ ಪೆಂಟ್ರಿ ರಸ್ತೆ , ವಸಂತ್ ನಗರ ಮತ್ತು ಕಂಟೋನ್ ಮೆಂಟ್ ಪ್ರದೇಶಗಳಲ್ಲಿ ಎಂದಿನಂತೆ ಡೆಲಿವರಿ ನಡೆಯಲಿದೆ, ಮೇಲ್ ವಿಂಗಡಣೆ ವಿಭಾಗವು ಕಾರ್ಯನಿರ್ವಹಿಸುತ್ತಿರುವುದರಿಂದ ನಗರದ ಇತರ
ಭಾಗಗಳಿಗೆ ವಿತರಣೆಗಳು ಪರಿಣಾಮ ಬೀರುವುದಿಲ್ಲ ಎಂದು  ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT