ರಾಜ್ಯ

ರಾಯಚೂರು, ಬೆಂಗಳೂರು, ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿಗೆ ಪ್ರಗತಿಪರ ರೈತರ ನೇಮಕ

Nagaraja AB

ಬೆಂಗಳೂರು: ರಾಯಚೂರು, ಧಾರವಾಡ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪ್ರಗತಿಪರ
 ರೈತರನ್ನು ನೇಮಿಸಲಾಗಿದೆ. ರಾಜ್ಯಪಾಲರು ಹಾಗೂ ಸಂಬಂಧಪಟ್ಟ ವಿಶ್ವವಿದ್ಯಾಲಯದ ಉಪಕುಲಪತಿಗಳ ಆದೇಶದನ್ವಯ
 ಈ ನೇಮಕಾತಿಯಾಗಿದೆ. 

ರಾಯಚೂರು ವಿವಿಗೆ ಕೊಪ್ಪಳದ ಮಹಂತೇಶಗೌಡ ಪಾಟೀಲ್ (ಸಾ.ವರ್ಗ), ಜಿ.ಶ್ರೀಧರ್ ಕೇಸರ ಹಟ್ಟಿ (ಸಾ.ವರ್ಗ)-ಕೊಪ್ಪಳ ಗಂಗಾವತಿ ಜಿಲ್ಲೆ, ಸುನಿಲ್ (ಪರಿಶಿಷ್ಟ ಜಾತಿ) -ರಾಯಚೂರು,  ಬೆಂಗಳೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ದಯಾನಂದ (ಸಾ.ವರ್ಗ)-ಬೆಂಗಳೂರು, ಸುರೇಶ್ ಎಂ. (ಸಾ.ವರ್ಗ)-ಬೆಂಗಳೂರು,  ಶ್ರೀರಾಮ (ಪ.ಜಾ)- ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರನ್ನು ನೇಮಕ ಮಾಡಲಾಗಿದೆ. 

ಧಾರವಾಡ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಯಲ್ಲನಗೌಡ ನಿಂಜನಗೌಡ ಪಾಟೀಲ್ (ಸಾಮಾನ್ಯ ವರ್ಗ)- ಕಲ್ಲಟಗಿ ತಾಲ್ಲೂಕು, ಧಾರವಾಡ ಜಿಲ್ಲೆ, ಮಲ್ಲೇಶ ಪಿ. (ಪ.ಜಾತಿ) - ವಿಜಯಪುರ ಇವರನ್ನು ನೇಮಿಸಲಾಗಿದೆ.

SCROLL FOR NEXT