ಸೀಲ್ಡ್ ಡೌನ್ ಆಗಿರುವ ಬೆಂಗಳೂರಿನ ವಿವಿ ಪುರಂ 
ರಾಜ್ಯ

ಹೋಮ್ ಕ್ವಾರಂಟೈನ್ ನಲ್ಲಿರುವವರ ಮನೆ ವಿಳಾಸ ಈಗ ಆನ್ ಲೈನ್ ನಲ್ಲಿ ಲಭ್ಯ!

ಅಂತರ ರಾಜ್ಯಗಳಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿರುವವರ ಮನೆ ವಿಳಾಸ ಈಗ ಆನ್ ಲೈನ್ ನಲ್ಲಿ ಲಭ್ಯವಿದೆ. ಕೋವಿಡ್-19 . ಕರ್ನಾಟಕ. ಗೌ.ಇನ್ ವೆಬ್ ಸೈಟ್ ನಲ್ಲಿ  ಹೋಮ್ ಕ್ವಾರಂಟೈನ್ ನಲ್ಲಿರುವವರ ಹೆಸರು ಮತಿತ್ತರ ವೈಯಕ್ತಿಕ ವಿಷಯಗಳನ್ನು ಹೊರತುಪಡಿಸಿ ಮನೆ ವಿಳಾಸವನ್ನು ಹಾಕಲಾಗುತ್ತಿದೆ. ಇವರಿಗೆ ಸಕಾರಾತ್ಮಕ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ.

ಬೆಂಗಳೂರು: ಅಂತರ ರಾಜ್ಯಗಳಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿರುವವರ ಮನೆ ವಿಳಾಸ ಈಗ ಆನ್ ಲೈನ್ ನಲ್ಲಿ ಲಭ್ಯವಿದೆ. ಕೋವಿಡ್-19 . ಕರ್ನಾಟಕ. ಗೌ.ಇನ್ ವೆಬ್ ಸೈಟ್ ನಲ್ಲಿ  ಹೋಮ್ ಕ್ವಾರಂಟೈನ್ ನಲ್ಲಿರುವವರ ಹೆಸರು ಮತಿತ್ತರ ವೈಯಕ್ತಿಕ ವಿಷಯಗಳನ್ನು ಹೊರತುಪಡಿಸಿ ಮನೆ ವಿಳಾಸವನ್ನು ಹಾಕಲಾಗುತ್ತಿದೆ. ಇವರಿಗೆ ಸಕಾರಾತ್ಮಕ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ.

ಹೊರರಾಜ್ಯದಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬರು 14 ದಿನಗಳ ಹೋಮ್ ಕ್ವಾರಂಟೈನ್ ಗೆ ಒಳಗಾಗಬೇಕಾಗುತ್ತದೆ. ಮಹಾರಾಷ್ಟ್ರದಿಂದ ಬಂದವರು ಹೆಚ್ಚುವರಿಯಾಗಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕಾಗುತ್ತದೆ ಎಂದು  ರಾಜ್ಯ ಕೋವಿಡ್-19 ವಾರ್ ರೂಮ್ ಉಸ್ತುವಾರಿ ಮುನಿಷ್ ಮೌದ್ಗಿಲ್ ತಿಳಿಸಿದರು.

ಈ ನಿರ್ಧಾರಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಸರ್ಕಾರದ ಕೊನೆಯ ಉಪಾಯದಂತೆ ತೋರುತ್ತದೆ. ಸ್ವಯಂ ನಿಯಂತ್ರಣ ಇದ್ದರೆ, ಇದರ ಅಗತ್ಯವಿರುತ್ತಿರಲಿಲ್ಲ.

ಯಾರಾದಾರೂ ಕ್ವಾರಂಟೈನ್ ಗೆ ಒಳಗಾದಾಗ ನೆರೆಹೊರೆಯವರು ತಿಳಿಯುವುದರಲ್ಲಿ ಯಾವುದೇ ಗೌಪ್ಯತೆ ಕಾಳಜಿ ಇಲ್ಲ ಎಂದು ಬೆಳ್ಳಂದೂರು ನಿವಾಸಿ ಜಯಕುಮಾರ್ ಹೇಳುತ್ತಾರೆ. ಆದಾಗ್ಯೂ,ಹೋಮ್ ಕ್ವಾರಂಟೈನ್ ಗೆ ಒಳಗಾಗುವವರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಾದರು ಏನಿರುತ್ತದೆ? ಎಂದು ಸಿಟಿಜನ್ ಆಫ್ ಬೆಂಗಳೂರು ಸದಸ್ಯರಾದ ತಾರಾ ಕೃಷ್ಣಸ್ವಾಮಿ ಪ್ರಶ್ನಿಸುತ್ತಾರೆ. 

ಕೊರೋನಾದೊಂದಿಗೆ ಇದನ್ನು ನಾವು ಸಾರ್ವಜನಿಕ ಆರೋಗ್ಯ ವಿಚಾರವೆಂದು ಪರಿಗಣಿಸುತ್ತಿಲ್ಲ, ಆದರೆ, ಪೊಲೀಸ್ ವಿಷಯವಾಗಿದೆ. ವಲಸೆ ಕಾರ್ಮಿಕರು, ವಲಸೆ ವಿದ್ಯಾರ್ಥಿಗಳು, ಹೊರಗಿನ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದವರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಏಲ್ಲಿಂದ ಬರುತ್ತಿದ್ದಾರೆ, ಏಲ್ಲಿಗೆ ಹೋಗುತ್ತಿದ್ದಾರೆ. ಅವರ ಕುಟುಂಬ ಸದಸ್ಯರು ಇದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಹಾಕಲಾಗಿದೆ  ಎಂದು ಮುನಿಷ್ ಮೌದ್ಗಿಲ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Nationwide strike: 'ಕಾರ್ಮಿಕ ನೀತಿ' ವಿರೋಧಿಸಿ ದೇಶಾದ್ಯಂತ ಮುಷ್ಕರ: 30 ಕೋಟಿ ಕಾರ್ಮಿಕರು ಭಾಗಿ, ಬ್ಯಾಂಕಿಂಗ್, ವಿದ್ಯುತ್ ಸೇವೆ ವ್ಯತ್ಯಯ!

'ಲೋಕಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಹೊಂದುವ ಜವಾಬ್ದಾರಿಯುತ ವ್ಯಕ್ತಿ ದೇಶದಲ್ಲಿಲ್ಲದಿರುವುದು ದುರದೃಷ್ಟಕರ'

ಬಳ್ಳಾರಿ NMDC ಕಬ್ಬಿಣದ ಅದಿರು ಕಳ್ಳಸಾಗಣೆ: ತನಿಖೆಗೆ ಸರ್ಕಾರ ಆದೇಶ, ಎಸ್ ಪಿ ಹೇಳಿದ್ದೇನು?

ಸ್ಪೀಕರ್ ಕೊಠಡಿಯಲ್ಲಿ ಕಾಂಗ್ರೆಸ್ ಸಂಸದರಿಂದ ಓಂ ಬಿರ್ಲಾ ಗೆ ನಿಂದನೆ, ಪ್ರಿಯಾಂಕಾ ಸಂಸದರನ್ನು ತಡೆಯಲಿಲ್ಲ: ರಿಜಿಜು

Thai school shooting: ಶಾಲೆ ಮೇಲೆ ಗುಂಡಿನ ಮಳೆ, 22 ಮಕ್ಕಳು ಸೇರಿ ಕನಿಷ್ಟ 34 ಸಾವು, ದಾಳಿಕೋರ ಪೊಲೀಸ್ ವಶಕ್ಕೆ!

SCROLL FOR NEXT