ರಾಜ್ಯ

ಬಾಗಲಕೋಟೆ: ವನ್ಯಜೀವಿಗಳೊಂದಿಗೆ ಟಿಕ್ ಟಾಕ್; ಯುವಕ ಬಂಧನ

Nagaraja AB

ಬಾಗಲಕೋಟೆ:  ರಾಷ್ಟ್ರ ಪಕ್ಷಿ ನವಿಲಿಗೆ ಹಿಂಸೆ ನೀಡಿ, ಮೊಲ ಕೊಂದು ಟಿಕ್ ಟಾಕ್ ವಿಡಿಯೋ ಮಾಡಿದ ಆರೋಪದಡಿ ಬಾಗಲಕೋಟೆ ಮೂಲದ ಯುವಕನೋರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮಾದಾಪುರ ಗ್ರಾಮದ ವಿಠ್ಠಲ ವಾಲಿಕಾರ ಬಂಧಿತ ಆರೋಪಿ.ಈತ ಮೊಲ ಕೊಂದು, ನವಿಲಿನೊಂದಿಗೆ ಟಿಕ್ ಟಾಕ್ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ.ವಿಠ್ಠಲ ಮಾದಾಪುರ ಗುಡ್ಡದಲ್ಲಿ ಎರಡು ಮೊಲ ಕೊಂದು, ನವಿಲು ಹಿಡಿದು ಟಿಕ್ ಟಾಕ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. 

ನಂತರ ಪ್ರಕರಣ ಜಾಡುಹಿಡಿದ ಹುನಗುಂದ ವಲಯ ಅರಣ್ಯಾಧಿಕಾರಿ ವಿರೇಶ್, ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ನೇತೃತ್ವದ ತಂಡ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಆತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

SCROLL FOR NEXT