ರಾಜ್ಯ

ಬೆಂಗಳೂರು: ರೌಡಿಶೀಟರ್ ಕೊಲೆಗೆ ಯತ್ನ; ಏಳು ಜನರ ಬಂಧನ

Raghavendra Adiga

ಬೆಂಗಳೂರು: ಹಳೇ ವೈಷಮ್ಯದ ಹಿನ್ನಲೆಯಲ್ಲಿ ಮಚ್ಚಿನಿಂದ ಕೊಚ್ಚಿ ರೌಡಿ ಶೀಟರ್ ಓರ್ವನನ್ನು ಕೊಲೆ ಮಾಡಿ ಹವಾ ಎಬ್ಬಿಸಲು ಯತ್ನಿಸಿದ್ದ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸೈಯದ್ ನವಾಜ್, ಸಯ್ಯದ್ ಶೋರಿಫ್, ಸಯ್ಯದ್ ಅರೀಫ್, ತಬ್ರೇಜ್ ಬೇಗ್, ಗಣೇಶ್ ಸೇರಿ 7 ಆರೋಪಿಗಳನ್ನು ಬಂಧಿಸಿದ್ದಾರೆ.

ಇದೇ ತಿಂಗಳ 6 ರಂದು ಕೋಗಿಲು ಬಳಿಯ ಬೆಳ್ಳಳ್ಳಿ ಕ್ರಾಸ್‌ ಸಮೀಪ ಯಲಹಂಕ ರೌಡಿಶೀಟರ್ ಲೋಕೇಶ್ ಅಲಿಯಾಸ್ ಲೋಕಿ ಮೇಲೆ ಗುಂಪೊಂದು ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಲೋಕಿ ಅವರ ತಾಯಿ ಮಹಾಲಕ್ಷ್ಮಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
 

SCROLL FOR NEXT