ರವಿ ಪೂಜಾರಿ 
ರಾಜ್ಯ

ಸುರೇಶ್ ಪೂಜಾರಿಯೇ ಸೆಲಬ್ರಿಟಿಗಳ ಫೋನ್ ನಂಬರ್ ಕೊಡುತ್ತಿದ್ದ: ರವಿ ಪೂಜಾರಿ

ಸುರೇಶ್ ಪೂಜಾರಿಯೇ ತನಗೆ ಎಲ್ಲಾ ನಟ, ರಾಜಕಾರಣಿ, ಉದ್ಯಮಿಗಳ ಕುರಿತು ಮಾಹಿತಿ ನೀಡುತ್ತಿದ್ದ ಎಂದು ಸಿಸಿಬಿ ವಿಚಾರಣೆ ವೇಳೆ ಭೂಗತ ಪಾತಕಿ ರವಿ ಪೂಜಾರಿ ಬಾಯ್ಬಿಟ್ಟಿದ್ದಾನೆ.

ಬೆಂಗಳೂರು: ಸುರೇಶ್ ಪೂಜಾರಿಯೇ ತನಗೆ ಎಲ್ಲಾ ನಟ, ರಾಜಕಾರಣಿ, ಉದ್ಯಮಿಗಳ ಕುರಿತು ಮಾಹಿತಿ ನೀಡುತ್ತಿದ್ದ ಎಂದು ಸಿಸಿಬಿ ವಿಚಾರಣೆ ವೇಳೆ ಭೂಗತ ಪಾತಕಿ ರವಿ ಪೂಜಾರಿ ಬಾಯ್ಬಿಟ್ಟಿದ್ದಾನೆ.

ಭೂಗತ ಪಾತಕಿ ರವಿ ಪೂಜಾರಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ತನಿಖೆ ವೇಳೆ ಸುರೇಶ್ ಪೂಜಾರಿಯ ಹೆಸರು ಕೇಳಿಬಂದಿದೆ. ಅನೇಕ ಪ್ರಕರಣಗಳಲ್ಲಿ ರವಿ ಪೂಜಾರಿ ಜೊತೆ ಸುರೇಶ್ ಪೂಜಾರಿ ಹೆಸರು ತಳುಕು ಹಾಕಿಕೊಂಡಿದೆ ಎನ್ನಲಾಗಿದೆ.

ಸುರೇಶ್ ಪೂಜಾರಿ, ಫೋನ್ ನಂಬರ್‌ಗಳನ್ನು ಸಂಗ್ರಹಿಸಿ ತನಗೆ ನೀಡುತ್ತಿದ್ದ. ಈ ಸಂದರ್ಭದಲ್ಲಿ ಸುರೇಶ್ ಪೂಜಾರಿ ಬಳಿ ಅವರ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೆ ಎಂದು ರವಿ ಪೂಜಾರಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.

ಉದ್ಯಮಿ, ರಾಜಕಾರಣಿ, ನಟರ ಬಗ್ಗೆ ಸುರೇಶ್ ಪೂಜಾರಿ ಮಾಹಿತಿ ನೀಡಿದ ನಂತರ ತಾನು ಕರೆ ಮಾಡಿ‌ ಅವರನ್ನು ಹೆದರಿಸುತ್ತಿದ್ದೆ ಎಂದು ರವಿ ಪೂಜಾರಿ ಬಾಯ್ಬಿಟ್ಟಿದ್ದಾನೆ.

ಸುರೇಶ್ ಪೂಜಾರಿ ಯಾರು..? ಆತನ ಹಿನ್ನೆಲೆ ಏನು..? ಎಂದು ಸದ್ಯ ಆತನ ಮಾಹಿತಿ ಕಲೆಹಾಕಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ದೂರದ ದೇಶದಲ್ಲಿ ಕುಳಿತಿದ್ದ ರವಿ ಪೂಜಾರಿಗೆ ಬಲಗೈ ಬಂಟನಾಗಿ ಸುರೇಶ್ ಪೂಜಾರಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. 

ಕೆಲವು ಕೇಸ್​ಗಳಲ್ಲಿ ರವಿ ಪೂಜಾರಿಯ ಸಹಚರರು ಬಂಧನವಾದ್ರೂ ಸುರೇಶ್ ಪೂಜಾರಿ ನಾಪತ್ತೆಯಾಗಿದ್ದ. ಖುದ್ದು ರವಿ ಪೂಜಾರಿಯೇ ಪೊಲೀಸರ ಖೆಡ್ಡಕ್ಕೆ ಬಿದ್ದರೂ ಆತನ ಬಲಗೈ ಬಂಟ ಇನ್ನೂ ಪತ್ತೆಯಾಗಿಲ್ಲ. 

ರಕ್ತ ಸಂಬಂಧಿಯಲ್ಲದಿದ್ರೂ ಸುರೇಶ್ ಪೂಜಾರಿ ರವಿ ಪೂಜಾರಿಗೆ ರಾಜ್ಯದ ಪ್ರತಿಯೊಂದು ಮಾಹಿತಿಯನ್ನ ಕೊಡುತ್ತಿದ್ದನಾ? ಎಂಬ ಅನುಮಾನ ಪೊಲೀಸರಲ್ಲಿ ಶುರುವಾಗಿದೆ. ಈತ ಉದ್ಯಮಿಗಳು, ಬಿಲ್ಡರ್​​ಗಳು, ರಾಜಕೀಯ ವ್ಯಕ್ತಿಗಳು, ನಟರ ನಂಬರ್​ಗಳನ್ನು ಸಂಗ್ರಹಿಸಿ ಬಳಿಕ ರವಿ ಪೂಜಾರಿಗೆ ರವಾನೆ ಮಾಡ್ತಿದ್ದನಂತೆ. ಬಳಿಕ ಉದ್ಯಮಿಗಳು, ರಾಜಕೀಯ ವ್ಯಕ್ತಿಗಳಿಗೆ ಕಾಲ್ ಮಾಡಿ ಹಣಕ್ಕೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. 

ಹಲವು  ಪ್ರಕರಣಗಳಲ್ಲಿ ರವಿ ಪೂಜಾರಿ‌ ಜತೆಗೆ  ಸುರೇಶ್ ಪೂಜಾರಿಯ ಹೆಸರು ಸೇರಿಕೊಂಡಿದೆ.  ಹೀಗಾಗಿ ವಿಚಾರಣೆ ವೇಳೆ ಸುರೇಶ್ ಪೂಜಾರಿಯ ಕುರಿತು ಸಿಸಿಬಿ ಪೊಲೀಸರು ರವಿ ಪೂಜಾರಿಯಿಂದ  ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈಗಾಗಲೇ ರವಿ ಪೂಜಾರಿಯ ಸಹಚರರನ್ನು ಬಂಧಿಸಲಾಗಿದೆ. ಆದರೆ, ಇನ್ನು ಕೂಡ ಸುರೇಶ್ ಪೂಜಾರಿ ತಲೆಮರಿಸಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT