17 ಕಾಂಗ್ರೆಸ್ ಶಾಸಕರನ್ನು ಹೊತ್ತು ತಂದ ವಿಮಾನ 
ರಾಜ್ಯ

ಕಮಲ್ ನಾಥ್ ಸರ್ಕಾರಕ್ಕೂ 'ಆಪರೇಷನ್ ಕಮಲ'ಕಂಟಕ?: ಮಧ್ಯ ಪ್ರದೇಶದ 17 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ 

ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಕಳೆದ ಅಪರಾಹ್ನ ಡಸ್ಸೌಲ್ಟ್ ಫಾಲ್ಕನ್ 2000ಎಲ್ಎಕ್ಸ್ ವಿಮಾನ ಬಂದಿಳಿಯುತ್ತಿದ್ದಂತೆ ದೂರದ ಮಧ್ಯ ಪ್ರದೇಶದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆದವು. ಈ ವಿಮಾನದಲ್ಲಿ ಕಾಂಗ್ರೆಸ್ ಶಾಸಕರು ಇದ್ದರು. ಅವರೆಲ್ಲರೂ ಪಕ್ಷದ ಬಂಡಾಯ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಅವರ ನಿಷ್ಠಾವಂತ ಶಾಸಕರು.

ಬೆಂಗಳೂರು: ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಕಳೆದ ಅಪರಾಹ್ನ ಡಸ್ಸೌಲ್ಟ್ ಫಾಲ್ಕನ್ 2000ಎಲ್ಎಕ್ಸ್ ವಿಮಾನ ಬಂದಿಳಿಯುತ್ತಿದ್ದಂತೆ ದೂರದ ಮಧ್ಯ ಪ್ರದೇಶದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆದವು. ಈ ವಿಮಾನದಲ್ಲಿ ಕಾಂಗ್ರೆಸ್ ಶಾಸಕರು ಇದ್ದರು. ಅವರೆಲ್ಲರೂ ಪಕ್ಷದ ಬಂಡಾಯ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಅವರ ನಿಷ್ಠಾವಂತ ಶಾಸಕರು.


ಟಾರ್ಟೆರ್ಡ್ ವಿಮಾನದಲ್ಲಿ ಎರಡೂವರೆ ಗಂಟೆ ಪ್ರಯಾಣ ಮಾಡಿ ಬಂದಿಳಿದ ಶಾಸಕರನ್ನು ಬೆಂಗಳೂರು ಸಮೀಪ ವೈಟ್ ಫೀಲ್ಡ್-ಮಾದವಪುರ ಬಳಿಯಿರುವ ರೆಸಾರ್ಟ್ ವೊಂದಕ್ಕೆ ಕರೆದೊಯ್ಯಲಾಯಿತು. ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರವನ್ನು ಉರುಳಿಸಲು ಆಪರೇಷನ್ ಕಮಲ ನಡೆಸುವ ಜವಾಬ್ದಾರಿ ಮಹದೇವಪುರ ಶಾಸಕ ಮತ್ತು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹಾಗೂ ಇತರ ಬಿಜೆಪಿ ನಾಯಕರಿಗೆ ಜವಬ್ದಾರಿ ವಹಿಸಿಕೊಡಲಾಗಿದೆ. 


ಬೆಂಗಳೂರಿಗೆ ತಲುಪಿದ 17 ಶಾಸಕರಲ್ಲಿ ಬಹುತೇಕರು ಸಚಿವರಾಗಿದ್ದಾರೆ. ಇನ್ನು ಇಬ್ಬರು ಶಾಸಕರಾದ ರಘುರಾಜ್ ಕನ್ಸನ ಮತ್ತು ಹೆಚ್ ಎಸ್ ದಂಗ್ ಕಳೆದ ವಾರದಿಂದ ನಗರದಲ್ಲಿದ್ದರು.


ನಿನ್ನೆ ರಾತ್ರಿ ಭೋಪಾಲ್ ನಲ್ಲಿ 28 ಸಚಿವರಲ್ಲಿ 20 ಮಂದಿ ಸಚಿವರು ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದು 14 ತಿಂಗಳ ಸರ್ಕಾರದಲ್ಲಿ ಉಂಟಾಗಿರುವ ತೀವ್ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಮುಖ್ಯಮಂತ್ರಿಗಳು ಇದೀಗ ಮತ್ತೆ ಸಚಿವ ಸಂಪುಟ ಪುನಾರ್ರಚನೆ ಮಾಡಬೇಕಿದೆ. ನಿನ್ನೆ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ 20 ಸಚಿವರು ಮುಖ್ಯಮಂತ್ರಿ ಕಮಲ್ ನಾಥ್ ಗೆ ತಮ್ಮ ರಾಜೀನಾಮೆಯನ್ನು ನೀಡಿದರು.


ಇನ್ನು ಇಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರಿಗೆ ಅಲ್ಲಿಂದ ಬಂದವರ ಬಗ್ಗೆ ಯಾವುದೇ ನಡೆ ತೆಗೆದುಕೊಳ್ಳದಂತೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುವಂತೆ ತಿಳಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ. ಬಂಡಾಯ ಶಾಸಕರ ಬಳಿ ಹೋಗಿ ಮಾತನಾಡಬೇಕೆಂದು ಹೈಕಮಾಂಡ್ ನಿಂದ ಆದೇಶ ಬಂದರೆ ಸಿದ್ದರಾಮಯ್ಯನವರಿಗೆ ನೆರವಾಗುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸಹ ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT