ರಾಜ್ಯ

ರಾಯಬಾಗ: ಗೆಳೆಯರ ಜೊತೆ ಈಜಲು ಹೋಗಿ ಕೃಷ್ಣಾನದಿ ಪಾಲಾದ ಯುವಕ 

Nagaraja AB

ರಾಯಬಾಗ: ಗೆಳೆಯರ ಜೊತೆ ಈಜಲು ಹೋದ ಯುವಕನೊಬ್ಬ ಕೃಷ್ಣಾನದಿ ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆ 
ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ‌ ನಡೆದಿದೆ. ಬಾವನಸೌಂದತ್ತಿ ನಿವಾಸಿ ಸಾಗರ ಪಾಂಡು ಯಮಾಜೆ(೨೪) ನೀರು ಪಾಲಾದ ಯುವಕ.

ಇಂದು ಬೆಳಗ್ಗೆ ಗೆಳೆಯರ ಜೊತೆಗೆ ಈತ ಈಜಲು ಹೋಗಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನಂತರ ರಾಯಬಾಗ ತಹಸೀಲ್ದಾರ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ  ಭೇಟಿ‌ ನೀಡಿ ಪರಿಶೀಲಿಸಿದರು.

ಬಳಿಕ ಗ್ರಾಮಸ್ಥರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರಗೆ ತರಲಾಯಿತು.  ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. 

SCROLL FOR NEXT