ರಾಜ್ಯ

ಕೋರೋನಾ ಭೀತಿ: ಬೆಂಗಳೂರಿನಲ್ಲಿ ನಾಳೆ ಆರಂಭವಾಗಬೇಕಿದ್ದ ಆರ್ ಎಸ್ಎಸ್ ಸಭೆ ರದ್ದು 

Sumana Upadhyaya

ನವದೆಹಲಿ: ನಾಳೆ ಆರಂಭವಾಗಬೇಕಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ಎಸ್)ದ ಮೂರು ದಿನಗಳ ವಾರ್ಷಿಕ ಸಭೆಯನ್ನು ಕೊರೋನಾ ವೈರಸ್ ಸೋಂಕು ಪಸರಿಸುವ ಗಂಭೀರ ಸಮಸ್ಯೆ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. 

ಅಖಿಲ ಭಾರತೀಯ ಪ್ರತಿನಿಧಿ ಸಭಾ(ಎಬಿಪಿಎಸ್) ವಾರ್ಷಿಕ ಸಭೆ ನಾಳೆಯಿಂದ 17ರವರೆಗೆ ಆಯೋಜಿಸಲಾಗಿತ್ತು. ಸಂಘಟನೆಯ ಮುಂದಿನ ಕ್ರಮಗಳ ಕುರಿತು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಿತ್ತು. 


ಆದರೆ ರಾಜ್ಯ ಸರ್ಕಾರ ಸಾರ್ವಜನಿಕ ಸಭೆ, ಸಮಾರಂಭಗಳನ್ನು ಒಂದು ವಾರಗಳ ಕಾಲ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಕೂಡ ರದ್ದಾಗಿದೆ ಎಂದು ಆರ್ ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಷಿ ತಿಳಿಸಿದ್ದಾರೆ.

ಆರ್ ಎಸ್ಎಸ್ ಕಾರ್ಯಕ್ರಮ ರದ್ದುಪಡಿಸುವಂತೆ ಇದಕ್ಕೂ ಮುನ್ನ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದರು. 

SCROLL FOR NEXT