ಸಾಮಾನ್ಯವಾಗಿ ಯುಗಾದಿ ಹಬ್ಬದ ಮುನ್ನಾದಿನ ವ್ಯಾಪಾರ ಭರಾಟೆಯಲ್ಲಿ ಜನರಿಂದ ಗಿಜಿಗಿಡುತ್ತಿದ್ದ ಕೆ ಆರ್ ಮಾರುಕಟ್ಟೆಯಲ್ಲಿ ನಿನ್ನೆ ಜನರಿಲ್ಲದೆ ಭಣಗುಡುತ್ತಿರುವುದು 
ರಾಜ್ಯ

ಯುಗಾದಿ ಶುಭದಿನ, ಜೀವನದ ಜೊತೆ ಜೂಜಾಟ ಆಡಬೇಡಿ:ಸರ್ಕಾರ, ಪೊಲೀಸರಿಂದ ಮನವಿ

ಮೈಸೂರು/ಬೆಂಗಳೂರು: ಇಂದು ಬುಧವಾರ ಹಿಂದೂ ಧರ್ಮೀಯರ ಬಹು ದೊಡ್ಡ ಹಬ್ಬ ಯುಗಾದಿ. ಆದರೆ ಕೊರೋನಾ ವೈರಸ್ ಭೀತಿ ಸಾಮಾನ್ಯ ಜನತೆಯನ್ನು ಕಂಗಾಲಾಗಿಸಿದೆ. ಹಬ್ಬದ ಸಂಭ್ರಮ-ಸಡಗರವನ್ನು ಮಂಕಾಗಿಸಿದೆ.

ಕೊರೋನಾ ವೈರಸ್ ನಿಯಂತ್ರಣ ಮೀರಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಪ್ರಧಾನಿ ಮೋದಿ 21 ದಿನಗಳ ಭಾರತದ ಸಂಪೂರ್ಣ ಲಾಕ್ ಡೌನ್ ನ್ನು ಕಳೆದ ಮಧ್ಯರಾತ್ರಿಯೇ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂದಿನಿಂದ 21 ದಿನಗಳ ಕಾಲ ಅಗತ್ಯ ತುರ್ತು ಕೆಲಸ ಬಿಟ್ಟರೆ ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ.

ಸರ್ಕಾರದ ಆದೇಶ ಧಿಕ್ಕರಿಸಿದರೆ ಜನರಿಗೆ ತೊಂದರೆಯಾಗುವುದಂತೂ ಖಂಡಿತ. ಯುಗಾದಿ ಹಬ್ಬವೆಂದು ಇಂದು ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣು ಕೊಳ್ಳಲೆಂದು ಜನದಟ್ಟಣೆ ಸೇರಿದರೆ ಅಲ್ಲಿಗೆ ಪೊಲೀಸರು ಬಂದು ಬೆದರಿಸುವುದಂತೂ ಖಂಡಿತ. ಹಬ್ಬವೆಂದು ಜೀವನದ ಜೊತೆ ಆಟವಾಡಬೇಡಿ ಎಂದು ಪೊಲೀಸರು, ಸರ್ಕಾರ ಈಗಾಗಲೇ ಜನರಿಗೆ ಎಚ್ಚರಿಕೆ ನೀಡಿದೆ.

ಸಾಮಾನ್ಯವಾಗಿ ಯುಗಾದಿ ಎಂದರೆ ಜನರು ಬೆಳಗ್ಗೆಯಿಂದಲೇ ಹಳ್ಳಿಗಳ ಕಡೆಯಲ್ಲಿ ಜೂಜಾಟ, ಕಾರ್ಡುಗಳ ಆಟದಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಜನರು ಶಾಲಾ ಕಟ್ಟಡಗಳು, ತೋಟ, ಮರದ ಅಡಿಗಳಲ್ಲಿ ಇಂದಿನಿಂದ ಊರವರೆಲ್ಲಾ ಕನಿಷ್ಠ ಎರಡು ದಿನ ಸೇರಿ ವಿನೋದಗಳಲ್ಲಿ ತೊಡಗುತ್ತಾರೆ.

ಆದರೆ ಹಲವು ಹಳ್ಳಿಗಳ ಕಡೆಗಳಲ್ಲಿ ಗ್ರಾಮದ ಹಿರಿಯರು ಜನರು ಗುಂಪು ಗುಂಪಾಗಿ ಸೇರುವುದು ಕ್ಷೇಮವಲ್ಲ, ಒಂದೆಡೆ ಸೇರಿ ಆಟ, ವಿನೋದಗಳಲ್ಲಿ ಭಾಗವಹಿಸುವುದು ಬೇಡ ಎಂದು ಹೇಳುತ್ತಿದ್ದಾರೆ. ಇದು ಸಹಜವಾಗಿಯೇ ಹಳ್ಳಿಗಳಲ್ಲಿ ಯುವಕರಿಗೆ ನಿರಾಸೆ ತಂದಿದೆ. ಸ್ಥಳೀಯ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳಿಗೆ ಊರು ಕಡೆಗಳಲ್ಲಿ ಜನರು ಸೇರಿ ಜೂಜಾಟಗಳಲ್ಲಿ ತೊಡಗುವುದನ್ನು, ಮದ್ಯ, ಮಾಂಸ ಮಾರಾಟಗಳನ್ನು ತಡೆಯುವುದು ಸವಾಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT