ರಾಜ್ಯ

ಬಂಟ್ವಾಳ: ಕೊರೋನಾ ತಗುಲಿದೆ ಎಂಬ ಶಂಕೆ, ವ್ಯಕ್ತಿ ಆತ್ಮಹತ್ಯೆ

Raghavendra Adiga

ಬಂಟ್ವಾಳ: ತನಗೆ ಕೊರೋನಾ ಸೋಂಕು ತಗುಲಿದೆ ಎಂದು ಶಂಕಿಸಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳದ ಮೆರಮಜಲು ಗ್ರಾಮ ವ್ಯಾಪ್ತಿಯ ಅಬ್ಬೆಟ್ಟು ನಿವಾಸಿ ಸದಾಶಿವ ಶೆಟ್ಟಿ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶೆಟ್ಟಿ ಸ್ಥಳೀಯ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದರು.

ತಾನು ಕೆಲಸ ಮಾಡುತ್ತಿರುವ ಪೆಟ್ರೋಲ್ ಬಂಕ್‌ನಲ್ಲಿ ದಿನವೂ ಸಾಕಷ್ಟು ಜನ ಬರುತ್ತಾರೆ. ಆ ಮಧ್ಯೆ ತಾನು ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿರಬಹುದೆಂದು ಸದಾಶಿವ ಶೆಟ್ಟಿ ಖಿನ್ನತೆಗೆ ಒಳಗಾಗಿದ್ದರು. ಅಷ್ಟೇ ಅಲ್ಲ ತನ್ನ ಮೂಲಕ ತನ್ನ ಕುಟುಂಬಕ್ಕೆ ಸಹ ಕೊರೋನಾ ಬರಬಹುದು  ಎಂದು ಆತ ಭಯಪಟ್ಟಿದ್ದರು.

 ಮಾರ್ಚ್ 27 ರ ಶುಕ್ರವಾರದಂದು ಅವರು ತಮ್ಮ ಮನೆಯ ಸೀಲಿಂಗ್ ಫ್ಯಾನ್‌ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಪತ್ನಿ ಸಲ್ಲಿಸಿದ ದೂರಿನ ಪ್ರಕಾರ ಬಂಟ್ವಾಳ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

SCROLL FOR NEXT