ಸಾಂದರ್ಭಿಕ ಚಿತ್ರ 
ರಾಜ್ಯ

ಪಂಜರದೊಳಗೆ ಮನುಜ ಕುಲ… ಕಾಡಿನ ಹೆದ್ದಾರಿಗಳಲ್ಲಿ ನಿರಾತಂಕವಾಗಿ ಓಡಾಡ್ತಿವೆ ಪ್ರಾಣಿ ಸಂಕುಲ!

ನೂರಾರು ವಾಹನಗಳ ಸದ್ದಿಗೆ ಅವಿತುಕೊಂಡು ರಾತ್ರಿ ವೇಳೆ ತಿರುಗಾಡುತ್ತಿದ್ದ ವನ್ಯಜೀವಿಗಳು, ಕೊರೋನಾ ವೈರಸ್​​ಗೆ ಹೆದರಿ ಮನುಷ್ಯ ತನ್ನ ಚೇಷ್ಟೆಗಳನ್ನು ಪಕ್ಕಕ್ಕಿಟ್ಟು ಮನೆಯಲ್ಲೇ ಇರುವುದರಿಂದ ಪ್ರಾಣಿಗಳು...

ಚಾಮರಾಜನಗರ: ನೂರಾರು ವಾಹನಗಳ ಸದ್ದಿಗೆ ಅವಿತುಕೊಂಡು ರಾತ್ರಿ ವೇಳೆ ತಿರುಗಾಡುತ್ತಿದ್ದ ವನ್ಯಜೀವಿಗಳು, ಕೊರೋನಾ ವೈರಸ್​​ಗೆ ಹೆದರಿ ಮನುಷ್ಯ ತನ್ನ ಚೇಷ್ಟೆಗಳನ್ನು ಪಕ್ಕಕ್ಕಿಟ್ಟು ಮನೆಯಲ್ಲೇ ಇರುವುದರಿಂದ ಪ್ರಾಣಿಗಳು, ಕಾನನದಲ್ಲಿ ಪಕ್ಷಿಗಳ ಕಲರವ ಲವಲವಿಕೆಯಿಂದ ಕೂಡಿದೆ.

ಇಡೀ ದೇಶವೇ ಈಗ ಕೊರೊನಾ ಕರಿಛಾಯೆಗೆ ಲಾಕ್ ಡೌನ್ ಆಗಿರುವುದರಿಂದ ಕೊರೊನಾ ಭೀತಿಗೆ ಮನುಷ್ಯ ಮನೆಯಲ್ಲಿ ಬಂಧಿಯಾಗಿದ್ದರೆ ಪ್ರಾಣಿಗಳು ಮಾತ್ರ ಮನುಷ್ಯನ ಗೈರು ಹಾಜರಿಯಲ್ಲಿ ನಿರಾಂತಕವಾಗಿ ಸಂಚರಿಸುತ್ತಿವೆ. 

ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ, ಕೆ.ಗುಡಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ, ಊಟಿ ರಸ್ತೆಯಲ್ಲಿ ಅಗತ್ಯ ವಸ್ತುಗಳ ವಾಹನಗಳ ಓಡಾಟ ಬಿಟ್ಟರೇ ಇನ್ನೆಲ್ಲವೂ ಬಂದ್​ ಆಗಿರುವುದರಿಂದ ಜಿಂಕೆ, ಕಾಡೆಮ್ಮೆ, ಕಡವೆಗಳಂತೂ ರಸ್ತೆಬದಿಯಲ್ಲೇ ಆರಾಮಾಗಿ ನಿಲ್ಲುತ್ತಿದ್ದು, ಸ್ವತಂತ್ರವಾಗಿ ವಿರಮಿಸುತ್ತಿವೆ.

ಮೂಲೆಹೊಳೆ ರಸ್ತೆ, ಪುಣಜನೂರು ರಸ್ತೆ ಮಧ್ಯೆ ಆನೆಗಳಂತೂ ರಸ್ತೆಯಲ್ಲೇ ಗಂಟೆಗಟ್ಟಲೇ ನಿಲ್ಲುತ್ತಿದ್ದು, ಕೊರೋನಾ ಪ್ರಾಣಿಗಳಿಗೆ ಉತ್ತಮವಾಗಿಯೇ ಪರಿಣಾಮ ಬೀರಿದೆ. ಇನ್ನು, ಈ ಕುರಿತು ವನ್ಯಜೀವಿ ಪ್ರೇಮಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ಇಲ್ಲಿಯವರೆಗೆ ಅವುಗಳು ಪಂಜರದೊಳಗೆ ಇದ್ದವು ಈಗ ಕೊರೋನಾ ವೈರಸ್ ನಿಂದ ಮನುಷ್ಯನು ಗೃಹಬಂಧನದಲ್ಲಿದ್ದು, ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

-ಗುಳಿಪುರ ನಂದೀಶ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT