ಪಾಪಣ್ಣ ಮಟನ್ ಸ್ಟಾಲ್ 
ರಾಜ್ಯ

ಹೊಸತೊಡಕಿನ ಸಂಭ್ರಮದಲ್ಲಿ ನಗರದ ಜನತೆ: ಪಾಪಣ್ಣ ಮಟನ್ ಸ್ಟಾಲ್ ನಲ್ಲಿ ಸರದಿ ಸಾಲು, ಗಗನಕ್ಕೇರಿದ ಮಾಂಸದ ಬೆಲೆ

ಯುಗಾದಿ ಮಾರನೇ ದಿನ ದಕ್ಷಿಣ ಕರ್ನಾಟಕದ ಜನತೆ ಮಾಂಸದೂಟ ಸೇವಿಸುವುದು ಸಂಪ್ರದಾಯ, ಅದಕ್ಕ ಸಿಲಿಕಾನ್ ಸಿಟಿಯ ಜನವೂ ಹೊರತಲ್ಲ, ಕೊರೋನಾ ಲೈರಸ್ ಸೋಂಕಿನ ಭೀತಿಯಿದ್ದರೂ ನಿನ್ನೆ ಬ್ಯಾಟರಾನಪುರದಲ್ಲಿ ಜನ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದ್ದಾರೆ.

ಬೆಂಗಳೂರು: ಯುಗಾದಿ ಮಾರನೇ ದಿನ ದಕ್ಷಿಣ ಕರ್ನಾಟಕದ ಜನತೆ ಮಾಂಸದೂಟ ಸೇವಿಸುವುದು ಸಂಪ್ರದಾಯ, ಅದಕ್ಕ ಸಿಲಿಕಾನ್ ಸಿಟಿಯ ಜನವೂ ಹೊರತಲ್ಲ, ಕೊರೋನಾ ಲೈರಸ್ ಸೋಂಕಿನ ಭೀತಿಯಿದ್ದರೂ ನಿನ್ನೆ ಬ್ಯಾಟರಾನಪುರದಲ್ಲಿ ಜನ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದ್ದಾರೆ.

ಪಾಪಣ್ಣ ಮಟನ್ ಸ್ಟಾಲ್ ನ ಖಾಯಂ ಗಿರಾಕಿಗಳು ನಿನ್ನೆ ಗಂಟೆಗಟ್ಟಲೇ ದೂರ ದೂರ ನಿಂತು ಸರದಿಯಲ್ಲಿ ಕಾದು ಮಾಂಸ ಖರೀದಿಸಿದ್ದಾರೆ,

73 ವರ್ಷದ ಹಿಂದೆ ಬ್ಯಾಟರಾಯನಪುರದಲ್ಲಿ ಆರಂಭವಾದ ಈ ಅಂಗಡಿ ಮೈಸೂರು ರೋಡ್ ನಲ್ಲಿದೆ ಕನಕಪುರ, ರಾಮನಗರ ಮತ್ತು ಮಾಗಡಿ ಗಳಿಂದ ಕುರಿಗಳನ್ನು ತಂದು ಕಟ್ ಮಾಡಿ ಮಾರಲಾಗುತ್ತದೆ. ಉತ್ತಮ ಗುಣಮಟ್ಟದ ಮಾಂಸ ನೀಡುವುದರಿಂದ ಬೆಂಗಳೂರಿನ ಹಲವು ಕಡೆಯಿಂದ ಇಲ್ಲಿಗೆ ಬರುತ್ತಾರೆ. ಸದ್ಯ ಪಾಪಣ್ಣ ಅವರ ಮೊಮ್ಮಗ ಈ ಅಂಗಡಿ ನಡೆಸುತ್ತಿದ್ದಾರೆ.

ಪ್ರತಿ ವರ್ಷ ಯುಗಾದಿ ಮಾರನೇ ದಿನ ಅಧಿಕ ಮಂದಿ ಮಟನ್ ಖರೀದಿಸಲು ಬರುತ್ತಾರೆ. ಈ ಬಾರಿ 1,500 ಕೆಜಿ ಮಾರಾಟವಾಗುತ್ತದೆ ಎಂದು ನಿರೀಕ್ಷಿಸಿದ್ದೆವು, ಆದರೆ ಕೊರೋನಾ ಭೀತಿಯಿಂದಾಗಿ ಖರೀದಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.  ಬೆಳಗ್ಗೆ 6 ಗಂಟೆಗೆ  ಅಂಗಡಿ ತೆರದಿದ್ದೆವು.ಆದರೆ ತೀರಾ ಕಡಿಮೆ ವ್ಯಾಪಾರ ನಡೆದಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಕೆಜಿಗೆ 550-600 ರು ಇದ್ದ  ಬೆಲೆ 750ಕ್ಕೇರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT