ರಾಜ್ಯ

ವೈರಮುಡಿ ಉತ್ಸವ ಮುಂದೂಡುವ ಪ್ರಶ್ನೆಯೇ ಇಲ್ಲ: ಮಂಡ್ಯ ಜಿಲ್ಲಾಧಿಕಾರಿ

Shilpa D

ಮಂಡ್ಯ: ವಿಶ್ವವಿಖ್ಯಾತ ವೈರಮುಡಿ ಉತ್ಸವ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ನಿರ್ದಿಷ್ಟ ನಕ್ಷತ್ರದಲ್ಲೇ ವೈರಮುಡಿ ಉತ್ಸವ ಮಾಡಬೇಕಿದೆ, ಅದನ್ನು ಮುಂದೂಡಿ, ಬೇರೆ ದಿನ ಮಾಡಲು ಸಾಧ್ಯವಿಲ್ಲ. ಹಾಗಾಗಿಯೇ ಅಂದೇ ಸರಳವಾಗಿ, ನಾಮಕಾವಸ್ತೆಗೆ ಆಚರಿಸಲು ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಐದಾರು ಅರ್ಚಕರು, ಒಂದಿಬ್ಬರು ಅಧಿಕಾರಿಗಳ ಸಮ್ಮುಖದಲ್ಲಿ ಆಚರಿಸಲಾಗುವುದು. ಕುಟುಂಬ ಸದಸ್ಯರಿಗೂ ನಿರ್ಬಂಧವಿದೆ. ಮುಖ್ಯ ದ್ವಾರದಲ್ಲೇ ಪೊಲೀಸರ ನಿಯೋಜನೆ ಮಾಡಿ, ಒಳ ಪ್ರವೇಶಿಸುವ ಎಲ್ಲರನ್ನೂ ಸ್ಕ್ರೀನಿಂಗ್ ಮಾಡಲಾಗುತ್ತೆ ಎಂದರು.

SCROLL FOR NEXT