ರಾಜ್ಯ

ಹುಕ್ಕೇರಿ: ಪಾದಚಾರಿಗಳ ಮೇಲೆ ಹರಿದ ಬೊಲೆರೋ ವಾಹನ, ಸ್ಥಳದಲ್ಲೇ ಮೂವರು ಸಾವು

Raghavendra Adiga

ಚಿಕ್ಕೋಡಿ: ಬೊಲೊರೋ ಜೀಪೊಂದು ಪಾದಾಚಾರಿಗಳ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯ ಹುಕ್ಕೇರಿಯಲ್ಲಿ ನಡೆದಿದೆ.

ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಗ್ರಾಮದ ಪ್ರೇಮಾ ರಾಜು ಬಂಗಾರಿ (38), ಜಯಶ್ರೀ ಯಲ್ಲಪ್ಪಾ ಮಾಲದಂಡಿ (40) ಹಾಗೂ ಸುಮಿತ್ರಾ ಭವಾನಿ (45)  ಎನ್ನುವವರು ಮೃತರಾಗಿದ್ದಾರೆ.

ಘಟನೆಯಲ್ಲಿ ಮತ್ತೆ ಮೂವರು ಗಂಬೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ನಡುವೆ ಬೊಲೆರೋ ಚಾಲಕ ಮಾತ್ರ ತನ್ನ ವಾಹನಕ್ಕೆ ಸಿಕ್ಕು ಮೂವರು ಮೃತಪಟ್ಟರೂ ಲೆಕ್ಕಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಸಿನಿಮೀಯ ರೀತಿಯಲ್ಲಿ ಹುಕ್ಕೇರಿ ಪೋಲೀಸರು ವಾಹನ ಬೆನ್ನಟ್ಟಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

SCROLL FOR NEXT