ರಾಜ್ಯ

ಹೊಸಪೇಟೆ: ಕೊರೋನಾ ಸುದ್ದಿ ಕೇಳಿ ಕೇಳಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಆತ್ಮಹತ್ಯೆ

Lingaraj Badiger

ಹೊಸಪೇಟೆ: ಮಾಹಾಮಾರಿ ಕೊರೋನಾ ಹಾವಳಿಯ ಸುದ್ದಿ ಕೇಳಿ ಕೇಳಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಸುದ್ದಿ ಕೇಳಿದಾಗಲೆಲ್ಲ ಬೆಚ್ಚಿ ಬೀಳುತಿದ್ದ ಮಹಿಳೆ, ತನಗೆ ಕೊರೋನಾ ಮಾರಿ ಬಂದರೆ ಹೇಗೆ ಎಂದು ಆಗಾಗಾ ಭಯ ಪಡುತಿದ್ದಳು.

ಮಾನಸಿಕ ಖಿನ್ನತೆಗೆ ಒಳಗಾಗಿದ್ದ 34 ವರ್ಷ ಲಕ್ಷ್ಮಿ  ಎಂಬ ಮಹಿಳೆ ಕೊನೆಗೆ ಇಂದು ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಮಹಿಳೆ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಜಬ್ಬಲ್ ವೃತ್ತದ ಬಳಿಯ ಪ್ರದೇಶದಲ್ಲಿ ವಾಸವಾಗಿದ್ದರು,

ಈ ಸಂಬಂಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT