ಸಾಂದರ್ಭಿಕ ಚಿತ್ರ 
ರಾಜ್ಯ

ದಿನದ ಪಾಸ್ ದರಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ: 50 ರೂ.ಗೆ ಇಳಿಸಲು ಬಿಎಂಟಿಸಿ ಚಿಂತನೆ

ಬೆಂಗಳೂರು ಮಹಾನಗರ ಸಾರಿಗೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸಂಚಾರ ಆರಂಭವಾದ ಖುಷಿಯಲ್ಲಿ ಜನತೆ ಇದ್ದರು.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸಂಚಾರ ಆರಂಭವಾದ ಖುಷಿಯಲ್ಲಿ ಜನತೆ ಇದ್ದರು.

ಆದರೆ ಬೆಂಗಳೂರು ಪ್ರಯಾಣಿಕರ ಖುಷಿ ಸ್ವಲ್ಪ ಹೊತ್ತಿನಲ್ಲಿಯೇ ಮಾಯವಾಯಿತು. ಬಿಎಂಟಿಸಿ ಪ್ರಯಾಣಿಕರಿಗೆ ದಿನದ, ವಾರದ ಮತ್ತು ತಿಂಗಳ ಪಾಸನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕೆಂದು ಆದೇಶ ಹೊರಡಿಸಿತು. ದಿನದ ಪಾಸಿನ ಮೊತ್ತ 70 ರೂಪಾಯಿ, ಹತ್ತಿರದ ಸ್ಥಳಗಳಿಗೆ ಹೋಗುವ ಪ್ರಯಾಣಿಕರಿಗೆ 70 ರೂಪಾಯಿ ಟಿಕೆಟ್ ಅಗತ್ಯವೂ ಇರುವುದಿಲ್ಲ, ದರ ದುಬಾರಿಯಾಯಿತೆಂದು ಆರೋಪಿಸಿದರು.

ಪ್ರಯಾಣಿಕರಿಂದ ಬಂದ ಟೀಕೆ, ಆರೋಪಗಳಿಂದ ಇದೀಗ ಬಿಎಂಟಿಸಿ 70ರೂಪಾಯಿಯಿಂದ ಟಿಕೆಟ್ ದರವನ್ನು 50 ರೂಪಾಯಿಗೆ ಇಳಿಸಲು ಮುಂದಾಗಿದೆ. ದಿನದ ಪಾಸಿಗೆ 50 ರೂಪಾಯಿ ನಿಗದಿಪಡಿಸಲಾಗುವುದು ಎಂದು ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಈ ಬಗ್ಗೆ ಮಾತುಕತೆ ಹಂತದಲ್ಲಿದೆ.

ನಗರದಲ್ಲಿ ಸುಮಾರು 2 ಸಾವಿರ ಬಸ್ಸುಗಳು ಸಂಚರಿಸುತ್ತಿದ್ದು ಇಂದು ಅದು 4 ಸಾವಿರಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ಮೈಬಿಎಂಟಿಸಿ ಆಪ್ ಮೂಲಕ ಆನ್ ಲೈ ನ್ ನಲ್ಲಿ ಟಿಕೆಟ್ ನೀಡಲು ಕ್ಯುಆರ್ ಕೋಡ್ ತಪಾಸಣೆಗೆ ಬಿಎಂಟಿಸಿ ಆರಂಭಿಸಿದ್ದು ಇದುವರೆಗೆ ಶೇಕಡಾ 10ರಷ್ಟು ಪ್ರಯಾಣಿಕರು ಮಾತ್ರ ಬಳಸಿದ್ದಾರೆ. ಬಿಎಂಟಿಸಿ ಇ ಟಿಕೆಟ್ ವ್ಯವಸ್ಥೆಯನ್ನು ಕೂಡ ಚಿಂತನೆ ನಡೆಸುತ್ತಿದೆ.

ನಿನ್ನೆ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಕೆಂಪೇಗೌಡ ಬಸ್ ನಿಲ್ದಾಣದಿಂದ ನಿನ್ನೆ 7,273 ಪ್ರಯಾಣಿಕರು ಸಂಚರಿಸಿದ್ದಾರೆ. ರಾಜ್ಯದ 63 ಕಡೆಗಳಲ್ಲಿ ಬಸ್ ಕಾರ್ಯನಿರ್ವಹಣೆ ಮಾಡಿದ್ದು 789 ಪ್ರಯಾಣಿಕರು ಶಿವಮೊಗ್ಗಕ್ಕೆ 33 ಬಸ್ಸುಗಳಲ್ಲಿ ಹೋಗಿದ್ದಾರೆ, ಅದು ನಿನ್ನೆಯ ದಿನ ಅಧಿಕವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT