ಸಂಗ್ರಹ ಚಿತ್ರd 
ರಾಜ್ಯ

ಮೂಢನಂಬಿಕೆಗಳೊಂದಿಗೆ ಕಳಂಕ ಹೊತ್ತಿದ್ದ ಚಾಮರಾಜನಗರ ಜಿಲ್ಲೆ ಈಗ ಇಡೀ ರಾಜ್ಯಕ್ಕೆ ಮಾದರಿ!

ಕಾಕತಾಳಿಯವೋ, ನಿಜಕ್ಕೂ ಶಾಪವೋ ಅಥವಾ ರಾಜಕೀಯ ಸ್ಥಿತ್ಯಂತರಗಳೊ ಮೂಢನಂಬಿಕೆಗಳೊಂದಿಗೆ ಕಳಂಕ ಹೊತ್ತಿದ್ದ ಚಾಮರಾಜನಗರ ಜಿಲ್ಲೆ ಇದೀಗ ಕೊರೋನಾ ನಿಗ್ರಹಿಸುವಲ್ಲಿ ಇಡೀ ರಾಜ್ಯಕ್ಕೇ ಮಾದರಿಯಾಗಿ ನಿಂತಿದೆ. 

ಮೈಸೂರು: ಕಾಕತಾಳಿಯವೋ, ನಿಜಕ್ಕೂ ಶಾಪವೋ ಅಥವಾ ರಾಜಕೀಯ ಸ್ಥಿತ್ಯಂತರಗಳೊ ಮೂಢನಂಬಿಕೆಗಳೊಂದಿಗೆ ಕಳಂಕ ಹೊತ್ತಿದ್ದ ಚಾಮರಾಜನಗರ ಜಿಲ್ಲೆ ಇದೀಗ ಕೊರೋನಾ ನಿಗ್ರಹಿಸುವಲ್ಲಿ ಇಡೀ ರಾಜ್ಯಕ್ಕೇ ಮಾದರಿಯಾಗಿ ನಿಂತಿದೆ. 

ಕೊರೋನಾ ಸೋಂಕಿನಿಂದ ಇಡೀ ರಾಜ್ಯ ಕಂಗಾಲಾಗಿರುವ ನಡುವಲ್ಲೇ ವೈರಸ್ ನಿಗ್ರಹಿಸುವಲ್ಲಿ ಚಾಮರಾಜನಗರ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲೀಗ ಒಂದು ಸೋಂಕು ಪ್ರಕರಗಳು ಕಂಡು ಬಂದಿಲ್ಲ. 

ಚಾಮರಾಜನಗರ ಜಿಲ್ಲೆಯಲ್ಲಿ ಮುಂಬೈ ಅಥವಾ ಮಹಾರಾಷ್ಟ್ರ ರಾಜ್ಯಗಳಿಂದ ಬರುವ ಜನರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿಲ್ಲ. ಜಿಲ್ಲೆಯಲ್ಲಿರು ಬಹುತೇಕ ಮಂದಿ ಕೂಡ ಉದ್ಯೋಗ ಅರಸಿ ಇತರೆ ರಾಜ್ಯ ಅಥವಾ ನಗರಗಳಿಗೆ ಹೋಗಿಲ್ಲ. ಇನ್ನು ತಮಿಳುನಾಡಿನಿಂದ ರಾಜ್ಯಕ್ಕೆ ಆಗಮಿಸಲು ಹಲವು ಜನರು ಆನ್'ಲೈನ್ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಜಿಲ್ಲಾಡಳಿತವಾಗಲೀ, ಪೊಲೀಸ್ ಇಲಾಖೆಯಾಗಲೀ ಅವರಿಗಿನ್ನೂ ಅನುಮತಿ ನೀಡಿಲ್ಲ. ಇಂತಹ ಮುನ್ನಚೆರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಚಾಮರಾಜನಗರ ಕೊರೋನಾ ನಿಗ್ರಹಿಸುವಲ್ಲಿ ಯಶಸ್ವಿ ಮಾರ್ಗದತ್ತ ಚಲಿಸುತ್ತಿದೆ. 

ಇತರೆ ರಾಜ್ಯಗಳಿಂದ ಜನರು ಗಡಿ ನುಸುಳದಂತೆ ಅಲ್ಲಿರುವ ಯುವಕರೇ ಸ್ವಯಂ ಪ್ರೇರಿತರಾಗಿ ಇದೀಗ ಗಡಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ವಲಸೆ ಕಾರ್ಮಿಕರ ಮೇಲೆ ಕಣ್ಗಾವಲಿರಿಸುವ ಅಧಿಕಾರಿಗಳು ಅವರನ್ನು ಕಂಡಕೂಡಲೇ ಕ್ವಾರಂಟೈನ್ ನಲ್ಲಿರಿಸುವ ಕೆಲಸ ಮಾಡುತ್ತಿದ್ದಾರೆ. 

ಈ ನಡುವೆ ಅಂತರ್ ರಾಜ್ಯ ವಾಹನಗಳು ಹಾಗೂ ಜನರನ್ನು ಗಡಿಯೊಳಗೆ ಬಿಡುತ್ತಿರುವ ಅಧಿಕಾರಿಗಳನ್ನೂ ಅಧಿಕಾರದಿಂದ ಅಮಾನತು ಮಾಡುವ ಕೆಲಸಗಳೂ ಕೂಡ ಜಿಲ್ಲೆಯಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಪೊಲೀಸ್ ಅಧಿಕಾರಿ ರವಿ ಹಾಗೂ ಕಂದಾಯ ಅಧಿಕಾರಿಯೊಬ್ಬರನ್ನು ಇತ್ತೀಚೆಗಷ್ಟೇ ಅಮಾನತು ಮಾಡಲಾಗಿತ್ತು. 

ವೈದ್ಯರು ಮತ್ತು ಅರೆಕಾಲಿಕ ವೈದ್ಯರು ಈಗಾಗಲೇ 2,341 ಸ್ವ್ಯಾಬ್‌ಗಳನ್ನು ಸಂಗ್ರಹಿಸಿದ್ದು,  ಕೋವಿಡ್ ಶಂಕಿತ ಪ್ರಕರಣಗಳನ್ನು ಗುರುತಿಸಲು ಮನೆ ಮನೆಗೆ ತೆರಳಿ ಆರೋಗ್ಯ ಪರೀಕ್ಷೆಗಳನ್ನು ನಡೆಸಲು ಆಶಾ ಕಾರ್ಮಿಕರನ್ನು ನಿಯೋಜನೆಗೊಳಿಸಿದ್ದಾರೆ. 

ಪರಿಶೀಲನೆ ವೇಲೆ ಯಾವುದೇ ಪ್ರದೇಶ ಅಥವಾ ಮನೆಯಲ್ಲಿರುವ ಜನರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿದ್ದೇ ಆದರೆ, ಸ್ಥಳಕ್ಕೇ ತೆರಳಿ ವೈದ್ಯರು ವೈದ್ಯಕೀಯ ಚಿಕಿತ್ಸೆ ನೀಡುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದ ಎಲ್ಲರ ವೈದ್ಯಕೀಯ ವರದಿಗಳೂ ನೆಗೆಟಿವ್ ಬಂದಿದ್ದು, 132 ಮಂದಿಯನ್ನು ಕ್ವಾರಂಟೈನ್'ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಂ.ಸಿ.ರವಿ ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT