ಪೊಲೀಸ ಕಾನ್ಸ್ ಟೇಬಲ್ ಜಿ.ಎನ್. ರವಿಕುಮಾರ್ 
ರಾಜ್ಯ

ಅರಮನೆ ಮೈದಾನದಲ್ಲಿ ಶೆಲ್ಟರ್ ಕುಸಿತ: ಮಕ್ಕಳನ್ನು ರಕ್ಷಿಸಿದ ಟ್ರೈನಿ ಪೊಲೀಸ್ ಕಾನ್ಸ್ ಟೇಬಲ್

ಭಾರೀ ಮಳೆಯಿಂದಾಗಿ ಶುಕ್ರವಾರ ರಾತ್ರಿ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರು ಹಾಗೂ ಅವರ ಮಕ್ಕಳು ಆಶ್ರಯ ಪಡೆದಿದ್ದ ತಾತ್ಕಾಲಿಕ ಶೆಲ್ಟರ್ ಗಳು ಕುಸಿಯತೊಡಗಿದ್ದವು. ಇದನ್ನು ನೋಡಿದ  ಪೊಲೀಸ್ ಕಾನ್ಸ್ ಟೇಬಲ್ ಜಿಎನ್ ರವಿಕುಮಾರ್ ಅವರನ್ನು ರಕ್ಷಿಸಿದ್ದಾರೆ. 

ಬೆಂಗಳೂರು: ಭಾರೀ ಮಳೆಯಿಂದಾಗಿ ಶುಕ್ರವಾರ ರಾತ್ರಿ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರು ಹಾಗೂ ಅವರ ಮಕ್ಕಳು ಆಶ್ರಯ ಪಡೆದಿದ್ದ ತಾತ್ಕಾಲಿಕ ಶೆಲ್ಟರ್ ಗಳು ಕುಸಿಯತೊಡಗಿದ್ದವು. ಇದನ್ನು ನೋಡಿದ  ಪೊಲೀಸ್ ಕಾನ್ಸ್ ಟೇಬಲ್ ಜಿಎನ್ ರವಿಕುಮಾರ್ ಅವರನ್ನು ರಕ್ಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅವರ ಪೋಷಕರಿಗೆ ಸಲಹೆ ನೀಡಿದ್ದಾರೆ.

ಪೊಲೀಸ್ ಇಲಾಖೆಗೆ ಸೇರಿ ಕೇವಲ ಮೂರು ತಿಂಗಳಾಗಿರುವ 27 ವರ್ಷದ ರವಿಕುಮಾರ್ ಅವರನ್ನು ಅರಮೈನ ಮೈದಾನದಲ್ಲಿದ್ದ ವಲಸೆ ಕಾರ್ಮಿಕರ ಮೇಲೆ ಕಣ್ಣಿಡಲು ನಿಯೋಜಿಸಲಾಗಿತ್ತು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರವಿಕುಮಾರ್,ಟೆನಿಸ್ ಪೆವಿಲಿಯನ್ ನಲ್ಲಿ ವಲಸೆ ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಲ್ಟರ್ ಗಳ ಮೇಲೆ ಬಿರುಗಾಳಿಗಾಳಿದ ಮರದ ಕೊಂಬೆಯೊಂದು ಬಿದ್ದಿತ್ತು.ಇದರಿಂದ ಶೆಲ್ಟರ್ ನ ಭಾಗವೊಂದು ಹಾನಿಯಾಗಿ, ಇನ್ನೊಂದು ಮೂಲೆಗೆ  ವಲಸೆ ಕಾರ್ಮಿಕರು ತೆರಳಿದರು.ಇದನ್ನು ನೋಡಿದ ನಾನು ಶೆಲ್ಟರ್ ನ ಇನ್ನೊಂದು ಭಾಗವು ಕುಸಿಯುವ ಸಾಧ್ಯತೆ ಇದ್ದರಿಂದ ಅಲ್ಲಿದ್ದವರನ್ನು ಬೇರೆಡೆಗೆ ಕರೆದೊಯ್ದೆ. ಟೆಂಟ್ ನ ಒಳಗಡೆ ಇದ್ದ ಮೂವರು ಮಕ್ಕಳು ಹಾಗೂ ಮಹಿಳೆಯೊಬ್ಬರನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾಗಿ ತಿಳಿಸಿದರು. 

ಪ್ರವಾಸೋದ್ಯಮ ನಿರ್ವಹಣೆಯಲ್ಲಿ ಎಂಬಿಎ ಪದವೀಧರನಾಗಿರುವ ರವಿಕುಮಾರ್, ಶಿವಮೊಗ್ದದ ಕುವೆಂಪು ವಿಶ್ವ ವಿದ್ಯಾನಿಯಲದ ಚಿನ್ನದ ಪದಕ ವಿಜೇತರಾಗಿದ್ದಾರೆ. ಜನರು ಪರ್ಸ್, ಚಪ್ಪಲಿಗಳನ್ನು ತೆಗೆದುಕೊಳ್ಳಲು ಕುಸಿದು ಬಿದ್ದಿರುವ ಅವಶೇಷಗಳ ಕಡೆಗೆ ಹೋಗದಂತೆ ಮನವೊಲಿಸುವುದು ತುಂಬಾ ಕಷ್ಟಕರವಾಗಿತ್ತು ಎಂದು ಅವರು ಹೇಳಿದ್ದಾರೆ. 

ರವಿಕುಮಾರ್ ಅವರ ಕಾರ್ಯವನ್ನು ಶ್ಲಾಘಿಸಿರುವ ಶಿವಾಜಿನಗರ ಇನ್ಸ್ ಪೆಕ್ಟರ್ ಸಿದ್ದರಾಜು, ರವಿಕುಮಾರ್ ಈಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇನ್ನೂ ತರಬೇತಿಯನ್ನು ಪೂರ್ಣಗೊಳಿಸಿಲ್ಲ.  ಸೇವೆಗೆ ಸೇರಿದ ದಿನದಿಂದಲೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೊಗಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT