ಡಿ ರೂಪ-ಕಂಗನಾ ರಣಾವತ್ 
ರಾಜ್ಯ

ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ: ನಟಿ ಕಂಗನಾಗೆ ಡಿ.ರೂಪಾ ತಿರುಗೇಟು

ಕರ್ನಾಟಕದಲ್ಲಿ ದೀಪಾವಳಿಗೆ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ತನ್ನ ಹಾಗೂ ಚಿತ್ರನಟಿ ಕಂಗನಾ ನಡುವಿನ ಟ್ವೀಟ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಎಡಿಜಿಪಿ ರೂಪಾ ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ದೀಪಾವಳಿಗೆ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ತನ್ನ ಹಾಗೂ ಚಿತ್ರನಟಿ ಕಂಗನಾ ನಡುವಿನ ಟ್ವೀಟ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಎಡಿಜಿಪಿ ರೂಪಾ ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ರೂಪಾ, ನಾನು ಕಾನೂನು ಪಾಲನೆ‌ ದೃಷ್ಟಿಯಿಂದ ಟ್ವೀಟ್ ಮಾಡಿ ಪಟಾಕಿ ಸಿಡಿಸದಂತೆ ಜನರಿಗೆ ತಿಳಿಸಿದ್ದೆ. ನನ್ನ ಶ್ರದ್ಧೆ ಪ್ರಾಮಾಣಿಕತೆ ಜನರಿಗೆ ಗೊತ್ತಿದೆ. ಸಾಮಾನ್ಯರ ಸಮಸ್ಯೆಗೆ ನಾನು ಸ್ಪಂದಿಸುವ ರೀತಿಯೂನನಗೆ ಗೊತ್ತಿದೆ. ನಾನು ಕಾನೂನು ಪಾಲನೆ ಬಿಟ್ಟು ಬೇರೆನೂ ಟ್ವೀಟ್ ಮಾಡಿಲ್ಲ ಎಂದರು.

ಪಟಾಕಿ ಬ್ಯಾನ್ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅದನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಡಿ. ರೂಪಾ ನವೆಂಬರ್‌ 14ರಂದು ಹಾಕಿದ್ದ ಪೋಸ್ಟ್ ನಲ್ಲಿ 'ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯಲ್ಲ, ವಿದೇಶಿಗರಿಂದ ಬಂದ ಸಂಪ್ರದಾಯ ಎಂದಿದ್ದರು. ರೂಪಾ ಟ್ವೀಟ್ ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಅದರಲ್ಲಿಯೂ ಟ್ರೂ ಇಂಡಾಲಜಿ ಖಾತೆ ಜೊತೆಗಿನ ಚರ್ಚೆ ರೂಪಾ ಅವರನ್ನು ಕೆರಳಿಸಿತ್ತು. 

ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಡಿ.ರೂಪಾ ಅವರಂತಹ ಜನರನ್ನು ನೇಮಿಸುತ್ತದೆ. ಆದರೆ, ಅವರು ನೋಡಿದರೆ ಸತ್ಯ ಆಧಾರಗಳಿಂದ ವಾದದಲ್ಲಿ ಗೆಲ್ಲುವ ಬದಲು ಖಾತೆಗಳನ್ನೇ ಬ್ಲಾಕ್ ಮಾಡಿದ್ದಾರೆ. ನಿಮಗೆ ನಾಚಿಗೆಯಾಗಬೇಕು ಎಂದಿತ್ತು. ಆಗ ಡಿ.ರೂಪಾ ವಿರುದ್ದ ನಟಿ ಕಂಗನಾ ಸೇರಿದಂತೆ ಹಲವರು ಪರ ವಿರೋಧ ಚರ್ಚೆ ನಡೆಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT