ಬೆಂಗಳೂರು: ಪೊಲೀಸ್ ಪೇದೆಗಳು ಕಳ್ಳರೊಂದಿಗೆ ಸೇರಿಕೊಂಡು ಚಿನ್ನಾಭರಣ ಅಂಗಡಿ ಮೇಲೆ ನಕಲಿ ದಾಳಿ ಮಾಡಿ ಚಿನ್ನಾಭರಣ ದೋಚಿರುವುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ದಾಳಿ ಹೆಸರಿನಲ್ಲಿ ಕಳ್ಳರಿಗೆ ಸಹಾಯ ಹಸ್ತ ನೀಡಿದ್ದ ಪೊಲೀಸ್ ಪೇದೆ ಸೇರಿ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪರವಾನಗಿ ಇಲ್ಲದೇ ವ್ಯಕ್ತಿಯೋರ್ವ ಚಿನ್ನದ ಅಂಗಡಿ ನಡೆಸುತ್ತಿದ್ದಾನೆ ಎಂಬ ಮಾಹಿತಿಯನ್ನೇ ಬಂಡವಾಳವಾಗಿಟ್ಟುಕೊಂಡು ಅಂಗಡಿ ಹಿಂದಿನ ಕಟ್ಟಡದ ಮಾಲೀಕ ಜೀತು ಎಂಬಾತ ನಕಲಿ ಪೊಲೀಸ್ ದಾಳಿ ಮಾಡಿ ಚಿನ್ನಾಭರಣ ದೋಚುವ ಸಂಚು ಒಂದನ್ನು ರೂಪಿಸಿದ್ದನು.