ರಾಜ್ಯ

ಕಾಫಿ ಬೆಳೆಗಾರರಿಗೆ ನೆರವು ಕೋರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಂಸದೆ ಶೋಭಾ ಕರಂದ್ಲಾಜೆ ಪತ್ರ!

Sumana Upadhyaya

ಬೆಂಗಳೂರು: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಲು ಈಗಿರುವ ಎಲ್ಲಾ ಸಾಲಗಳನ್ನು ಮರುರಚನೆ ಮಾಡಬೇಕು, ಕಾಫಿ ಬೆಳೆಗಾರರ ಬೆಳೆ ಸಾಲ, ಅಭಿವೃದ್ಧಿ ಸಾಲಗಳ ಮೇಲಿನ ಬಡ್ಡಿದರ ಕಡಿಮೆ ಮಾಡಿ, 9 ವರ್ಷಗಳ ಅವಧಿಗೆ ಏಕ ಅವಧಿಯ ಸಾಲವನ್ನಾಗಿ ಬದಲಾಯಿಸಬೇಕು, ವರ್ಷಕ್ಕೆ ಶೇಕಡಾ 3ರಷ್ಟು ಬಡ್ಡಿದರ ಇಳಿಸಬೇಕು ಎಂದು ಪತ್ರದಲ್ಲಿ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. 

ಹೊಸದಾಗಿ ಸಾಲ ಪಡೆಯುವ ಕಾಫಿ ಬೆಳೆಗಾರರಿಗೆ 20 ಲಕ್ಷದವರೆಗೆ ಶೇಕಡಾ 3ರ ಬಡ್ಡಿದರದಲ್ಲಿ ವಾಣಿಜ್ಯ ಬ್ಯಾಂಕುಗಳಿಂದ ಎಲ್ಲಾ ವರ್ಗದವರಿಗೆ ಸಾಲ ದೊರಕುವಂತೆ ಮಾಡಬೇಕೆಂದು ಸಹ ಒತ್ತಾಯಿಸಿದ್ದಾರೆ.

SCROLL FOR NEXT