ಸಂಗ್ರಹ ಚಿತ್ರ 
ರಾಜ್ಯ

ಶುರುವಾಯ್ತು ಹಬ್ಬದ ಸೀಸನ್: ಗಗನಕ್ಕೇರಿದ ಹೂವಿನ ಬೆಲೆ, ಗ್ರಾಹಕರು ಕಂಗಾಲು

ಹಬ್ಬದ ಸೀಸನ್ ಆರಂಭವಾಗಿದ್ದು, ನವರಾತ್ರಿಯ ಮೊದಲ ದಿನದಿಂದಲೇ ಪೂಜೆ ಹಾಗೂ ಅಲಂಕಾರಕ್ಕೆ ಅತ್ಯಗತ್ಯವಿರುವ ಹೂವಿನ ಬೆಲೆಗಳು ಗಗನಕ್ಕೇರಿದೆ. 

ಬೆಂಗಳೂರು: ಹಬ್ಬದ ಸೀಸನ್ ಆರಂಭವಾಗಿದ್ದು, ನವರಾತ್ರಿಯ ಮೊದಲ ದಿನದಿಂದಲೇ ಪೂಜೆ ಹಾಗೂ ಅಲಂಕಾರಕ್ಕೆ ಅತ್ಯಗತ್ಯವಿರುವ ಹೂವಿನ ಬೆಲೆಗಳು ಗಗನಕ್ಕೇರಿದೆ. 

ಮೈಸೂರು ಮಲ್ಲಿಗೆ ಸೇರಿದಂತೆ ಇತರೆ ಹೂವಿನ ಬೆಲೆಗಳು ಮೊದಲಿದ್ದ ಬೆಲೆಗಿಂತಲೂ 4-5 ಬಾರಿಯಷ್ಟು ಏರಿಕೆ ಕಂಡಿದೆ. ಹೂವಿನ ಬೆಲೆ ಏರಿಕೆಯೂ ಕೇವಲ ಗ್ರಾಹಕರಷ್ಟೇ ಅಲ್ಲದೆ, ಮಾರಾಟಗಾರರ ನಿದ್ದೆಯನ್ನೂ ಕೆಡುವಂತೆ ಮಾಡಿದೆ. 

ಈ ವರೆಗೂ ಕೆಜಿಗೆ ರೂ.250 ಇದ್ದ ಮಲ್ಲಿಗೆ ಇದೀಗ ರೂ.1,500ಕ್ಕೆ ಏರಿಕೆಯಾಗಿದೆ. ಇನ್ನು ರೂ.200 ಇದ್ದ ಕನಕಾಂಬರ ಬೆಲೆ ರೂ.800ಕ್ಕೆ ಏರಿಕೆಯಾಗಿದೆ. ಕೆಜಿ ರೂ.20 ಇದ್ದ ಗುಲಾಬಿ ಬೆಲೆ ರೂ.240ಕ್ಕೆ ತಲುಪಿದೆ. ಈ ಬೆಲೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂದರ್ಭದಷ್ಟರಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಆಯುಧಪೂಜೆಗೆ ಮಾರಿಗೋಲ್ಡ್ ಹೂವಿಗೆ ಬೇಡಿಕೆಗಳು ಹೆಚ್ಚಾಗಲಿದ್ದು, ಈ ಹೂವನ್ನು ಪಾಂಡವಪುರ, ಕೆಆರ್.ಪೇಟೆ, ನಾಗಮಂಗಲ ಮತ್ತು ಮಳವಳ್ಳಿಯಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಈಗಾಗಲೇ ಈ ಭಾಗದಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ಬೆಳೆಗಳು ನಾಶಗೊಂಡಿವೆ. ಈ ಕಾರಣದಿಂದ ಈ ಬಾರಿ ಮಾರಿಗೋಲ್ಡ್ ಹೂವಿನ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.

ಬೆಲೆ ಏರಿಕೆಯಾಗಿದ್ದರೂ ರೈತರಲ್ಲಿ ಈ ಬೆಳವಣಿಗೆ ಸಂತಸವನ್ನು ತಂದಿಲ್ಲ. ಕೊರೋನಾ ವೈರಸ್ ಪರಿಣಾಮ ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹೂವಿನ ಖರೀದಿ ಕುಸಿತ ಕಂಡ ಹಿನ್ನಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ರೂ.60 ಲಕ್ಷದಷ್ಟು ಹೂವು ನಷ್ಟವಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

SCROLL FOR NEXT