ಹಂದಿ ಸಾಕಾಣಿಗೆ ಮೇಲೆ ಕೊರೋನಾ ವೈರಸ್ ನ ಹೊಸ ತಳಿಯ ಕರಾಳ ಛಾಯೆ 
ರಾಜ್ಯ

ಹೊಸ ತಳಿಯ ಕೊರೋನಾ ವೈರಸ್ ನಿಂದ ಹಂದಿ ಸಾಕಾಣಿಕೆ ಮೇಲೆ ಪರಿಣಾಮ!

ಕೊರೋನಾ ವೈರಸ್ ನಿಂದಾಗಿ ಉಂಟಾಗಿರುವ ತಲ್ಲಣವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಾಗಲೇ ಕೊರೋನಾದ ಹೊಸ ತಳಿ ಮತ್ತೊಂದು ತಲೆಬಿಸಿಗೆ ಕಾರಣವಾಗಿದೆ. 

ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ಉಂಟಾಗಿರುವ ತಲ್ಲಣವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಾಗಲೇ ಕೊರೋನಾದ ಹೊಸ ತಳಿ ಮತ್ತೊಂದು ತಲೆಬಿಸಿಗೆ ಕಾರಣವಾಗಿದೆ. 

ಹೊಸ ಅಧ್ಯಯನದ ಪ್ರಕಾರ ಕೊರೋನಾದ ಹೊಸ ತಳಿಯೊಂದು ಹಂದಿಗಳನ್ನು ಬಾಧಿಸುತ್ತಿದ್ದು, ಇದನ್ನು ಸ್ವೈನ್ ಅಕ್ಯೂಟ್ ಡಯಾರಿಯಾ ಸಿಂಡ್ರೋಮ್ ಕೊರೋನಾ ವೈರಸ್ (ಎಸ್ಎಡಿಎಸ್-ಸಿಒವಿ) ಎಂದು ಗುರುತಿಸಲಾಗಿದೆ. 

ಕೊರೋನಾ ವೈರಸ್ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರಿದರೆ ಈ ಎಸ್ಎಡಿಎಸ್-ಸಿಒವಿ ಕರುಳಿನ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆರೋಗ್ಯದ ಮೇಲೆಯಷ್ಟೇ ಅಲ್ಲದೇ ಇದು ಹಂದಿ ಮಾಂಸ ಉತ್ಪನ್ನಗಳ ಮೇಲೆ ಆಧಾರಿತವಾಗಿರುವ ಉದ್ಯಮಗಳ ಮೇಲೆಯೂ ಪರಿಣಾಮ ಬೀರಿ ಆರ್ಥಿಕತವಾಗಿಯೂ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಚಾಪೆಲ್ ಹಿಲ್ ನ ನಾರ್ತ್ ಕೆರೊಲಿನಾದಲ್ಲಿ ಈ ಕುರಿತು ಸಂಶೋಧನೆ ನಡೆದಿದ್ದು, ಹಂದಿಗಳಲ್ಲಿ ಹರಡುವ ಎಸ್ಎಡಿಎಸ್-ಸಿಒವಿ ಕೊರೋನಾ ವೈರಸ್ ಮನುಷ್ಯರಿಗೂ ಹರಡುವ ಸಾಮರ್ಥ್ಯ ಹೊಂದಿದೆ. ಆದರೆ ಅದೃಷ್ಟವಶಾತ್ ಈ ವರೆಗೂ ಮನುಷ್ಯರಲ್ಲಿ ಈ ವೈರಾಣು ಹರಡಿಲ್ಲ.  2016 ರಲ್ಲಿ ಬಾವಲಿಗಳಲ್ಲಿ ಕಂಡಬಂದಿದ್ದ ವೈರಾಣು ಚೀನಾದಲ್ಲಿ ಹಂದಿಗಳಲ್ಲಿಯೂ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು. ಈ ಬಗ್ಗೆ ಪೋರ್ಕ್ ಉದ್ಯಮಕ್ಕೂ ಸಹ ಅತ್ಯಂತ ಕಡಿಮೆ ಮಾಹಿತಿ ಇದೆ ಎನ್ನಲಾಗುತ್ತಿದೆ.

ದಕ್ಷಿಣ ಕನ್ನಡದ ಪೋರ್ಕ್ ಉದ್ಯಮದ ಮೇಲೆ ಈಗಾಗಲೇ ಕೋವಿಡ್-19 ಕರಿನೆರಳು ಆವರಿಸಿದೆ. ಈ ಉದ್ಯಮದ ಮೇಲೆ ಆಧಾರವಾಗಿದ್ದವರು ತೀವ್ರ ನಷ್ಟ ಎದುರಿಸಬೇಕಾಗುತ್ತಿದೆ. ಆದರೆ ಹೊಸದಾಗಿ ಹಂದಿಗಳಿಗೆ ಯಾವುದೇ ವೈರಾಣುಗಳು ಹರಡಿರುವುದು ಕಂಡುಬಂದಿಲ್ಲ ಎನ್ನುತ್ತಾರೆ ದಕ್ಷಿಣ ಕನ್ನಡದಲ್ಲಿ  ಪಿಗ್ ಫಾರ್ಮ್ ನಡೆಸುತ್ತಿರುವ ಬಿಎನ್ ನಾಗರಾಜ

ಸಧ್ಯಕ್ಕೆ ಈ ವೈರಾಣು ಹಂದಿಗಳಲ್ಲಿ ಕಂಡುಬಂದಿಲ್ಲವಾದರೂ ಈ ಬಗ್ಗೆ ಎಚ್ಚರ ವಹಿಸುವುದು ಸೂಕ್ತವಾಗಿದೆ ಎನ್ನುತ್ತಿದ್ದಾರೆ ಸಂಶೋಧಕರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT