ರಾಜ್ಯ

ಭೀಮಾನದಿಯಲ್ಲಿ ಮುಳುಗಿ ನಾಲ್ವರು ಯುವಕರು ನೀರುಪಾಲು

Vishwanath S

ಯಾದಗಿರಿ: ಭೀಮಾನದಿಯಲ್ಲಿ ಈಜಲು ತೆರಳಿದ್ದ ಐವರ ಪೈಕಿ ನಾಲ್ವರು ಜಲಸಮಾಧಿಯಾಗಿದ್ದು ಅದೃಷ್ಟವಶಾತ್ ಓರ್ವ ಬದುಕುಳಿದಿದ್ದಾನೆ. 

ಯಾದಗಿರಿ ನಗರದ ಅಜೀಜ್ ಕಾಲೋನಿಯ ಯುವಕರಾದ 16 ವರ್ಷದ ಅಮನ್, ಅಯಾನ್(16), ಇರ್ಫಾನ್(17) ರಿಯಾನ್(16) ಮೃತ ದುರ್ದೈವಿಗಳು.

ಮೃತದೇಹಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸುತ್ತಿದೆ. ಸ್ಥಳಕ್ಕೆ ಯಾದಗಿರಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

SCROLL FOR NEXT