ಸಾಂದರ್ಭಿಕ ಚಿತ್ರ 
ರಾಜ್ಯ

ಕೋವಿಡ್-19 ಎಫೆಕ್ಟ್ : ವೆಚ್ಚ ತಗ್ಗಿಸಲು ಮೈಸೂರಿನತ್ತ ಕಣ್ಣು ಹಾಕಿದ ಬೆಂಗಳೂರಿನ ಐಟಿ / ಐಟಿಇಎಸ್ ಸಂಸ್ಥೆಗಳು

ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ  ಪರಿಣಾಮದಿಂದಾಗಿ ತಂತ್ರಜ್ಞಾನದ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡಲು ಎರಡನೇ ಹಂತದ ನಗರಗಳತ್ತ ದೃಷ್ಟಿ ಬೀರಿವೆ.

ಮೈಸೂರು: ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ  ಪರಿಣಾಮದಿಂದಾಗಿ ತಂತ್ರಜ್ಞಾನದ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡಲು ಎರಡನೇ ಹಂತದ ನಗರಗಳತ್ತ ದೃಷ್ಟಿ ಬೀರಿವೆ.

ಬಹುತೇಕ ಐಟಿ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ನೌಕರರು ಕಚೇರಿಗೆ ಮರಳುವ ಲಕ್ಷಣಗಳು ಕಾಣದೇ ಅನೇಕ ಕಂಪನಿಗಳು ವಿಶೇಷವಾಗಿ ಕಾರ್ಯಾಚರಣೆಗೆ ತೊಂದರೆಗೀಡಾಗಿರುವ ಕಂಪನಿಗಳು,ಪಾರಂಪರಿಕ ನಗರದಲ್ಲಿ ಕಚೇರಿ ಹೊಂದಲು ಎದುರು ನೋಡುತ್ತಿವೆ.

ಅಗತ್ಯವಿರುವ ಮಾನವ ಸಂಪನ್ಮೂಲದೊಂದಿಗೆ ಮೈಸೂರಿನಲ್ಲಿ ಕಚೇರಿಗೆ ಹೊಂದಲು ಅನೇಕ ಕಂಪನಿಗಳು ಎದುರು ನೋಡುತ್ತಿದ್ದು, ಈಗಾಗಲೇ ಕೆಲ ಕಂಪನಿಗಳು ಕಾರ್ಯಾಚರಣೆ ಆರಂಭಿಸಿವೆ.

ಕಾರ್ಯಾಚರಣೆ ವೆಚ್ಚ, ವಿಶೇಷವಾಗಿ ದುಬಾರಿ ಬಾಡಿಗೆ ವೆಚ್ಚವನ್ನು ಉಳಿತಾಯ ಮಾಡುವಂತಾಗಿದೆ. ಬಹುತೇಕ ಕಂಪನಿಗಳಲ್ಲಿ 50ರಿಂದ 100 ನೌಕರರು ಇರಲಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬಿಪಿಒ ಮತ್ತು ಕೆಪಿಒನಂತಹ ಕೈಗಾರಿಕೆಗಳು ಮೈಸೂರಿನಲ್ಲಿ ದೊಡ್ಡದಾಗಿರುವ ವಾಣಿಜ್ಯಾತ್ಮಕ ಜಾಗಗಳನ್ನು ಹುಡುಕುತ್ತಿವೆ.

ಮೈಸೂರಿನಲ್ಲಿ ವ್ಯವಹಾರ ಆರಂಭಿಸಲು ಹೆಚ್ಚು ಕಮ್ಮಿ ಒಂದು ಡಜನ್ ಕಂಪನಿಗಳು ತಮ್ಮನ್ನು ಕೋರಿರುವುದಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿಕೆ ಲಿಂಗರಾಜು ಹೇಳಿದ್ದಾರೆ.ಕಾರ್ಯಾಚರಣೆ ವೆಚ್ಚ ಮತ್ತು ಮಾನವ ಸಂಪನ್ಮೂಲ ಕೂಡಾ ಕಡಿಮೆ ದರದಲ್ಲಿ ದೊರೆಯಲಿದ್ದು, ಮೈಸೂರಿನಲ್ಲಿ ಕೈಗಾರಿಕೆ ಸ್ಥಾಪಿಸುತ್ತಿರುವುದಾಗಿ ಉದ್ಯಮಿ ವಿನಾಯಕ್ ತಿಳಿಸಿದ್ದಾರೆ.

ಅಗತ್ಯ ಮಾನವ ಸಂಪನ್ಮೂಲದ ಲಭ್ಯತೆಯೊಂದಿಗೆ ಅನೇಕ ಕಂಪನಿಗಳು ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಲು ಎದುರು ನೋಡುತ್ತಿವೆ. ಇಂತಹ ಅನೇಕ ಕಂಪನಿಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ ಎಂದು ಮೈಸೂರಿನ ಸಿಐಐ ಮಾಜಿ ಅಧ್ಯಕ್ಷ ಭಾಸ್ಕರ್ ಕಾಲಾಳೆ ಸ್ಪಷ್ಪಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT