ಬಂಧಿತ ಆರೋಪಿಗಳು 
ರಾಜ್ಯ

ಮಳವಳ್ಳಿ ಪೊಲೀಸರ ಮಿಂಚಿನ ಕಾರ್ಯಾಚರಣೆ; ಶೋಕಿಗಾಗಿ ಬೈಕ್ ಕದ್ದು ಮಾರಾಟ ಮಾಡುತ್ತಿದ್ದ ಖದೀಮರ ಬಂಧನ

ಶೋಕಿಗಾಗಿ ಕದ್ದು ಬೈಕ್ಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಮಳವಳ್ಳಿ ಪೊಲೀಸರು ಬಂಧಿತರಿಂದ ೧೬ ಬೈಕ್ ಗಳನ್ನು ಳನ್ನು ವಶಪಡಿಸಿಕೊಂಡಿದ್ದಾರೆ.

ಮಂಡ್ಯ: ಶೋಕಿಗಾಗಿ ಕದ್ದು ಬೈಕ್ಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಮಳವಳ್ಳಿ ಪೊಲೀಸರು ಬಂಧಿತರಿಂದ ೧೬ ಬೈಕ್ ಗಳನ್ನು ಳನ್ನು ವಶಪಡಿಸಿಕೊಂಡಿದ್ದಾರೆ.

ಮಳವಳ್ಳಿಯ ಎನ್.ಅಭಿಷೇಕ್ ಅಲಿಯಾಸ್ ಅಭಿ, ಪ್ರಶಾಂತ್ ಅಲಿಯಾಸ್ ಕಪ್ಪೆ,ಪ್ರಮೋದ ಅಲಿಯಾಸ್ ಪ್ರಮು ಎಂಬ ಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ.ಮಂಡ್ಯದ ಮಂಜ,ಮತ್ತು ಗಜ,ಗುರು ಎಂಬುವವರು ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

ಬಾಚನಹಳ್ಳಿಯ ನಾಗೇಂದ್ರಪ್ರಸಾದ್ ಎನ್. ಅವರು ತಮ್ಮ ಬೈಕ್ ಕಳುವಾಗಿರುವ ಬಗ್ಗೆ ಮಳವಳ್ಳಿ ಗ್ರಾಮಾಂತರ ಠಾಣೆಗೆ ಸೆ.೨೪ ರಂದು ದೂರು ನೀಡಿದ್ದರು,ಪ್ರಕರಣದ ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಪೃಥ್ವಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.ತನಿಖೆಯ ವೇಳೆ ಸೆ.೨೫ ರಂದು ಬಾಚನಹಳ್ಳಿ ನಾಗೇಂದ್ರಪ್ರಸಾದ್ ಅವರ ಬೈಕ್ ಕಳುವು ಮಾಡಿದ್ದ ಆರೋಪಿ ಅಭಿಷೇಕ್ ಮಾಲು ಸಹಿತ ಸಿಕ್ಕಿಬಿದ್ದಿದ್ದ,ವಿಚಾರಣೆಯ ವೇಳೆ ಸಹಚರರಾದಪ್ರಶಾಂತ್ ,ಪ್ರಮೋದ ಅವರ ಬಗ್ಗೆಯೂ ಬಾಯಿಬಿಟ್ಟಿದ್ದ,

ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ಜಿಲ್ಲೆಯ ವಿವಿಧೆಡೆಗಳಲ್ಲಿ ಡಿಯೋ,ಆರ್ಎಕ್ಸ್-೧೦೦,ಆಕ್ಟೀವಾಹೋಂಡಾ, ಹೋಂಡಾಶೈನ್,ಸ್ಪೆಂಡರ್ ಬೈಕ್ ಸೇರಿದಂತೆ ಸುಮಾರು ೧೬ ಬೈಕ್ ಗಳನ್ನು ಕಳವು ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಅವರು ನೀಡಿದ ಮಾಹಿತಿಯಂತೆಯೇ ಸುಮಾರು ೧೬ ಬೈಕ್ ಗಳು ಮತ್ತು ೨೫೦೦೦ ರುಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ,ತಲೆಮರೆಸಿಕೊಂಡಿರುವ  ಬಂಧಿಸಲು ಪೊಲೀಸರು ಬಲೆಬೀಸಿದ್ದಾರೆ.ಆರೋಪಿಗಳ ಪತ್ತೆಕಾರ್ಯದಲ್ಲಿ ಮಳವಳ್ಳಿ ಠಾಣೆಯ ಪಿಎಸೈ ಹೆಚ್.ಹನುಮಂತಕುಮಾರ್,ರವಿಶಂಕರ್,ಎಎಸೈ ರವೀಂದ್ರಕುಮಾರ್,ರವಿಕುಮಾರ್,ಸಿಬ್ಬಂದಿಗಳಾದ ರಾಜು,ಕೃಷ್ಣ,ಮಾದೇಶ್,ನಾಗೇಂದ್ರ,ಸುರೇಶ್,ನಾಗೇಂದ್ರ,ಸುನಿಲ್ ಅವರನ್ನೊಳಗೊಂಡ ತಂಡ ಪಾಲ್ಗೊಂಡಿತ್ತು.ಕಳ್ಳರನ್ನು ಹಿಡಿದ ಪೊಲೀಸ್ ತಂಡಕ್ಕೆ  ಜಿಲ್ಲಾಪೊಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಬಹುಮಾನ ಘೋಷಿಸಿದ್ದಾರೆ.

-ನಾಗಯ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT