ಸಾಂದರ್ಭಿಕ ಚಿತ್ರ 
ರಾಜ್ಯ

ಕೃಷಿ ಮಸೂದೆ, ಭೂ ಸುಧಾರಣೆ ಮಸೂದೆಗೆ ವಿರೋಧ: ಆನ್ ಲೈನ್ ಅಭಿಯಾನಕ್ಕೆ ರೈತ ಸಂಘಗಳು ನಿರ್ಧಾರ

ಭೂ ಸುಧಾರಣಾ ಮಸೂದೆ ಮತ್ತು ಕೃಷಿ ಮಸೂದೆಯನ್ನು ತರುತ್ತಿರುವ ಕೇಂದ್ರ ಸರ್ಕಾರ ಮತ್ತು ಅದರ ಪರವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ, ಬಂದ್ ಬಳಿಕ ಇದೀಗ ಪ್ರತಿಭಟನಾಕಾರರು, ರೈತ ಮುಖಂಡರು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನ ನಡೆಸಲು ಮುಂದಾಗಿದ್ದಾರೆ.

ಮೈಸೂರು: ಭೂ ಸುಧಾರಣಾ ಮಸೂದೆ ಮತ್ತು ಕೃಷಿ ಮಸೂದೆಯನ್ನು ತರುತ್ತಿರುವ ಕೇಂದ್ರ ಸರ್ಕಾರ ಮತ್ತು ಅದರ ಪರವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ, ಬಂದ್ ಬಳಿಕ ಇದೀಗ ಪ್ರತಿಭಟನಾಕಾರರು, ರೈತ ಮುಖಂಡರು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನ ನಡೆಸಲು ಮುಂದಾಗಿದ್ದಾರೆ.

ಆನ್ ಲೈನ್ ಪ್ರತಿಭಟನೆಯನ್ನು ಆಯೋಜಿಸಲು ರೈತರು ಮುಂದಾಗಿದ್ದು ಭಾಷಣಗಳು ಮತ್ತು ಅಂಕಿಅಂಶಗಳ ಮೂಲಕ ಭಾರೀ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.ಸಾಮಾನ್ಯ ಪ್ರತಿಭಟನೆ, ಬಂದ್, ಟ್ರಾಕ್ಟರ್ ರ್ಯಾಲಿಗಳು, ಪ್ರತಿಕೃತಿ ದಹನ, ಅಭಿಯಾನ, ಹೆದ್ದಾರಿಗಳಲ್ಲಿ ಅಡುಗೆ ಮಾಡಿ ಪ್ರತಿಭಟನೆ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ನಾಯಕರ ಗಮನ ಸೆಳೆಯಲು ಸಾಧ್ಯವಿಲ್ಲ.

ಇದಕ್ಕಾಗಿ ಇದೀಗ ರೈತರು ಐಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ತಮ್ಮ ಮಕ್ಕಳು, ಸೋದರ, ಸೋದರಿಯರು, ಬಂಧುಗಳನ್ನು ಸರ್ಕಾರದ ವಿರುದ್ಧ ರೈತ ವಿರೋಧಿ ಅಭಿಯಾನ ನಡೆಸಲು ಬಳಸಿಕೊಳ್ಳುತ್ತಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಂದಿನ ನಾಯಕರಾದ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಮಾಡಿದ್ದ ಭಾಷಣದ ವಿಡಿಯೊವನ್ನು ಆನ್ ಲೈನ್ ನಲ್ಲಿ ಹರಿಬಿಡುತ್ತಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕೃಷಿ ಸಮುದಾಯ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಬಿಜೆಪಿ ಅಭಿಯಾನವನ್ನು ಎದುರಿಸಲು ನಾವು ಸಾಮಾಜಿಕ ಮಾಧ್ಯಮವನ್ನು ಬಳಸುತ್ತೇವೆ. ಐಟಿ ಉದ್ಯೋಗಿಗಳ ಸೇವೆಯನ್ನು ಲಕ್ಷಾಂತರ ರೈತರನ್ನು ತಲುಪಲು ಬಳಸುತ್ತೇವೆ, ಮನೆ ಮನೆಗೆ ತೆರಳಿ, ರೈತ ವಿರೋಧಿ ನೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇವೆ, ರೈತರನ್ನು ಕಾರ್ಪೊರೇಟ್ ಸಂಸ್ಥೆಗಳು ಸ್ವಾಧೀನಪಡಿಸಿಕೊಳ್ಳದಂತೆ ಉಳಿಸುತ್ತೇವೆ ಎಂದರು.

ರೈತ ಸಂಘಟನೆಗಳ ಒಕ್ಕೂಟವು ಮೋದಿ ಮತ್ತು ಇದಲ್ಲದೆ ಯಡಿಯೂರಪ್ಪ ಸರ್ಕಾರಗಳನ್ನು ಎದುರಿಸಲು ಬಿಜೆಪಿ ನಾಯಕರ ಭಾಷಣಗಳ ತುಣುಕುಗಳ ಮೂಲಕ ಹೋಗುತ್ತಿದೆ. ಬಹುಭಾಷಾ ಹ್ಯಾಂಡ್‌ಬಿಲ್‌ಗಳು, ಬಿಜೆಪಿಯ ಪ್ರತಿಪಾದನೆಗಳನ್ನು ಪ್ರತಿ-ಪಾಯಿಂಟ್‌ಗಳೊಂದಿಗೆ ಹೊಂದಿದ್ದು, ಸರ್ಕಾರದ ವಿರೋಧಿ "ರೈತ ವಿರೋಧಿ" ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಎಸ್ಕಾಮ್‌ಗಳ ಖಾಸಗೀಕರಣ, ಮುಕ್ತ ವಿದ್ಯುತ್ ಹಿಂತೆಗೆದುಕೊಳ್ಳುವ ಪಿತೂರಿ ಮತ್ತು ಕೃಷಿ ಕ್ಷೇತ್ರದ ಸಾಂಸ್ಥಿಕರಣವನ್ನು ಉತ್ತೇಜಿಸಲು ಕನಿಷ್ಠ ಬೆಂಬಲ ಬೆಲೆಯನ್ನು ರದ್ದುಗೊಳಿಸುವಂತಹ ನೀತಿಗಳ ಬಗ್ಗೆ ಜನತೆಗೆ ಮನದಟ್ಟು ಮಾಡುತ್ತೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT