ಬೆಂಗಳೂರು: ಅಗತ್ಯವಿರುವ ಎಲ್ಲಾ ವ್ಯಕ್ತಿಗಳಿಗೂ ಸರಿಯಾದ ವೈದ್ಯಕೀಯ ಸೇವೆ ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಖಾಸಗಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್ ಮತ್ತು ಹೋಟೆಲ್ ಗಳ ಸಹಯೋಗದಲ್ಲಿ ಬೆಡ್ ವವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ಪ್ರಧಾನಿ ನರೇಂದ್ರ ಮೋದಿಯವರ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ಗುಪ್ತಾ, ಆಮ್ಲಜನಕವನ್ನು ಆಮದು ಮಾಡಿಕೊಳ್ಳುವುದು, ಟ್ಯಾಂಕರ್ ಮತ್ತು ಸಿಲಿಂಡರ್ ಮೂಲಕ ಅನಿಲ ಸರಬರಾಜು ಮಾಡುವುದು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.
ಕೇಂದ್ರದ ಹಾಸಿಗೆ ವ್ಯವಸ್ಥೆ ನಿಯಮದ ಪ್ರಕಾರ ಶೀಘ್ರವೇ 11 ಸಾವಿರ ಬೆಡ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಉದ್ಯಾನವನಗಳನ್ನು ಇನ್ನೂ ಏಕೆ ಮುಚ್ಚಿಲ್ಲ ಎಂದು ಕೇಳಿದಾಗ, ಮುಚ್ಚಿದ ಸ್ಥಳಗಳಲ್ಲಿ ಕರೋನಾ ವೈರಸ್ ಹೆಚ್ಚು ಸಕ್ರಿಯವಾಗಿದೆ ಎಂದು ವರದಿಯಾಗಿದೆ , ಹೀಗಾಗಿ ರೆಸ್ಟೊರೆಂಟ್ಗಳು, ಬಾರ್ಗಳು ಮತ್ತು ಇತರ ಸ್ಥಳಗಳಿಗೆ ನಿರ್ಬಂಧಗಳನ್ನು
ವಿಧಿಸಲಾಗಿದೆ.
ಆದರೆ ತೆರೆದ ಸ್ಥಳಗಳಲ್ಲಿ ಯಾವುದೇ ನಿರ್ಬಂಧಗಳನ್ನು ಹಾಕಲಾಗಿಲ್ಲ. ತಜ್ಞರು ಮತ್ತು ಸಲಹಾ ಸಮಿತಿಯ ಸಲಹೆಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ, ಬಿಬಿಎಂಪಿಯ ಮಹಾದೇವಪುರ ವಿಭಾಗವು ಸರ್ಕಾರಿ-ಉಲ್ಲೇಖಿತ ರೋಗಿಗಳಿಗೆ ಶೇಕಡಾ 50 ಹಾಸಿಗೆಗಳನ್ನು ಕಾಯ್ದಿರಿಸದ ಆರು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ,
ಏಪ್ರಿಲ್ 22 ರಂದು ಬಿಬಿಎಂಪಿ ಅಧಿಕಾರಿಗಳು ಜೀವಿಕಾ, ಬ್ರೂಕ್ ಫೀಲ್ಡ್ ಮತ್ತು ಕೋಶಿಸ್ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದರು. ಶುಕ್ರವಾರ, ತಂಡಗಳು ವೈಟ್ಫೀಲ್ಡ್, ನಾರ್ತ್ ಸೈಡ್ ಮತ್ತು ಶ್ರೀ ಸಾಯಿ ಆಸ್ಪತ್ರೆಗಳ ಮಣಿಪಾಲ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿದವು.
ಬಿಬಿಎಂಪಿ ಮಣಿಪಾಲ್ ಆಸ್ಪತ್ರೆಯ ಒಪಿಡಿಯನ್ನು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು. ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಆಸ್ಪತ್ರೆಯಲ್ಲಿ 106 ಹಾಸಿಗೆಗಳಿವೆ, ಆದರೆ 56 ರ ಬದಲು ಕೇವಲ 42 ಮಾತ್ರ ಕಾಯ್ದಿರಿಸಲಾಗಿತ್ತು, ಸರ್ಕಾರದ ನಿಯಮ ಒಪ್ಪಿಕೊಂಡು ಹಾಸಿಗೆಗಳನ್ನು ಕಾಯ್ದಿರಿಸಿದ ನಂತರವೇ ಒಪಿಡಿ ಸೇವೆಯನ್ನು ಮತ್ತೆ ತೆರೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.