ಆರೋಗ್ಯ ಸಚಿವ ಡಾ.ಕೆ.ಸುಧಾಕರ್ 
ರಾಜ್ಯ

ಕೋವಿಡ್ ಚಿಕಿತ್ಸೆ ಸೇವೆಗೆ ನಾಳೆಯಿಂದ ವೆಬ್‌ಫೋರ್ಟಲ್ ಆರಂಭ: ಸಚಿವ ಡಾ. ಸುಧಾಕರ್

ಕೋವಿಡ್ ಚಿಕಿತ್ಸೆ ಮಾಹಿತಿಗಾಗಿ‌ ನಾಳೆ ಒಂದು ಪೋರ್ಟಲ್ ಲಾಂಚ್ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಬೆಂಗಳೂರು: ಕೋವಿಡ್ ಚಿಕಿತ್ಸೆ ಮಾಹಿತಿಗಾಗಿ‌ ನಾಳೆ ಒಂದು ಪೋರ್ಟಲ್ ಲಾಂಚ್ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಹಲವಾರು ಜನ ಕೋವಿಡ್ ಚಿಕಿತ್ಸೆಗಾಗಿ ಅಳಿಲು ಸೇವೆ ಮಾಡುತ್ತೇವೆ ಎಂದು ಕರೆ ಮಾಡುತ್ತಿದ್ದಾರೆ.

ರಾಜ್ಯದ ಜನರಿಗೆ ಕರೆ ಕೊಡುತ್ತೇವೆ ನಮ್ಮ ಪೋರ್ಟಲ್, ವೆಬ್ ಸೈಟ್ ಆ್ಯಡ್ ಕೊಡುತ್ತೇವೆ. ನೀವು ಫಿಸಿಕಲ್ ಕೆಲಸ ಮಾಡಬೇಕಿಲ್ಲ, ನೀವು ಮನೆಯಲ್ಲಿ ಕೂತು ಮಾಡಬಹುದು. ಮೆಡಿಕಲ್ ಅಡ್ವೈಸ್ ಕೊಡಬಹುದು.

ಪದವೀಧರರು, ನಿವೃತ್ತ ಅಧಿಕಾರಿಗಳು ಸೇವೆ ಮಾಡಬಹುದು. ಕೋವಿಡ್ ಕೇರ್ ಸೆಂಟರ್ ನಲ್ಲಿ ಸೇವೆ ಮಾಡುತ್ತೇವೆ ಎನ್ನುವವರು ಬರಬಹುದು. ಜಿಲ್ಲೆಗಳಲ್ಲಿ ಕೂಡ ಕೆಲಸ ಮಾಡಬಹುದು. ನಮ್ಮ ಪೋರ್ಟಲ್ ನಲ್ಲಿ ದಾಖಲು ಮಾಡಬಹುದು. ಅವಶ್ಯಕತೆ ಇದ್ದರೆ ಅವರಿಗೆ ಭತ್ಯೆ ಅಥವಾ ವಿಶೇಷ ಸರ್ಟಿಫಿಕೇಟ್ ಕೊಡುವುದಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.

ನಿಮ್ಮ ಸೇವೆ ಮುಖ್ಯ, ಅದಕ್ಕಾಗಿ ನೆನಪಿಗೆ ಸರ್ಟಿಫಿಕೇಟ್ ಕೊಡುತ್ತೇವೆ ಎಂದರು.

ಪ್ರಾರಂಭದಲ್ಲಿ ಆರೋಗ್ಯ ಆಪ್ತಮಿತ್ರ ಆಪ್ ಉಪಯೋಗ ಮಾಡಿದ್ದೆವು. ಜನವರಿ ಫೆಬ್ರವರಿ ನಲ್ಲಿ ಅದನ್ನು ಹಿಂದಕ್ಕೆ ತೆಗೆದುಕೊಂಡಿದ್ದೆವು. ನಮ್ಮ ಕೆಲಸಗಾರರು ಕಡಿಮೆ ಇದ್ದರಿಂದ ನಿಲ್ಲಿಸಲಾಗಿತ್ತು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT