ರಾಜ್ಯ

ಹಾವೇರಿ: 85 ಬಾವಲಿಗಳನ್ನು ಹತ್ಯೆ ಮಾಡಿದ ಐವರ ಬಂಧನ

Lingaraj Badiger

ಹಾವೇರಿ: 85 ಬಾವಲಿಗಳನ್ನು ಹತ್ಯೆ ಮಾಡಿದ ಆರೋಪದಡಿ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಜಿಲ್ಲೆಯ ಹಿರೇಕೆರೂರಿನ ಮಾಸೂರು ಗ್ರಾಮದ ಸಮೀಪ ಕುಮದ್ವತಿ ನದಿ ದಡದಲ್ಲಿ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ಹತ್ಯೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಮಂಜುನಾಥ ರಾಮಣ್ಣ, ತುಮಕೂರು ಮೂಲದ ಕೃಷ್ಣಪ್ಪ ರಾಮಕೃಷ್ಣಯ್ಯ, ಸಂಕಾಪುರದ ನಾರಾಯಣ ನಾರಾಯಣಪ್ಪ, ಗೋಲೂರಿನ ಲೋಕೇಶ ಲಕ್ಷ್ಮಯ್ಯ ಸಂಕಾಪುರ, ಸತ್ಯಮಂಗಲದ ಹುಲ್ಲೂರಯ್ಯ ಲಕ್ಷ್ಮಯ್ಯ ಎಂಬುವವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರಿಂದ 85 ಮೃತ ಬಾವಲಿಗಳು, ಒಂದು ವಾಹನ, ಬಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಸಿಬ್ಬಂದಿ ಚಮನ್‌ಅಲಿ ಕಾಲೆಖಾನವರ, ವಿ.ಬಿ.ಮೊಹಿತೆ, ಅಬ್ದುಲ್‌ ಖಾದರ್‌ ಜಿಲಾನಿ, ಕನಕೇಶ, ಬಸವರಾಜ, ಗುರುಪ್ರಸಾದ, ಪ್ರಶಾಂತ, ಪ್ರವೀಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

SCROLL FOR NEXT