ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ಬಾಲಕಾರ್ಮಿಕರ ಕಳ್ಳಸಾಗಣೆ ಹೆಚ್ಚಳ

ಕಳೆದ ತಿಂಗಳು ರಕ್ಷಿಸಲಾದ 101 ಮಕ್ಕಳಲ್ಲಿ 56 ಮಂದಿ ಬಿಹಾರದವರಾದರೆ, 15 ಮಂದಿ ಕರ್ನಾಟಕ ಮೂಲದವರು, 12 ಮಂದಿ ಉತ್ತರಪ್ರದೇಶದವರು ಸೇರಿದ್ದಾರೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರಕ್ಕೆ ಬಾಲಕಾರ್ಮಿಕರ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 101 ಮಕ್ಕಳನ್ನು ರೈಲ್ವೇ ಭದ್ರತಾ ಪಡೆ ರಕ್ಷಣೆ ಮಾಡಿದೆ. ಅವರಲ್ಲಿ 9 ಮಂದಿ ಹೆಣ್ಣುಮಕ್ಕಳು ಸೇರಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ನೂರರಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಮಕ್ಕಳು ಬಿಹಾರ ಮೂಲದವರು. 

ರೈಲ್ವೇ ಭದ್ರತಾ ಪಡೆಯ 'ನನ್ಹೇ ಪರಿಷ್ತೇ' ಎನ್ನುವ ಪ್ರತ್ಯೇಕ ವಿಭಾಗ, ರೈಲಿನಲ್ಲಿ ಬಾಲಾ ಕಾರ್ಮಿಕರನ್ನು ಸಾಗಣೆ ಮಾಡುವ ಬಗ್ಗೆ ತೀವ್ರ ನಿಗಾ ಇರಿಸಿದೆ. ಕಳೆದ ತಿಂಗಳು ರಕ್ಷಿಸಲಾದ 101 ಮಕ್ಕಳಲ್ಲಿ 56 ಮಂದಿ ಬಿಹಾರದವರಾದರೆ, 15 ಮಂದಿ ಕರ್ನಾಟಕ ಮೂಲದವರು, 12 ಮಂದಿ ಉತ್ತರಪ್ರದೇಶದವರು ಸೇರಿದ್ದಾರೆ.

ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಮಕ್ಕಳು ತಾವು ಮದರಸಾದಲ್ಲಿ ಕಲಿಯಲು ಬಂದವರು ಎಂದು ಹೇಳಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಮಕ್ಕಳು ಹೇಳಿದ್ದ ಮದರಸಾಗಳು ಕೊರೊನಾ ಕಾರಣದಿಂದ ಬಂದ್ ಆಗಿರುವ ವಿಷಯ ತಿಳಿದುಬಂದಿತ್ತು.

ನಂತರ ಮಕ್ಕಳನ್ನು ತೀವ್ರವಾಗಿ ವಿಚಾರಣೆಗೆ ಗುರಿಪಡಿಸಿದಾಗ ತಮಗೆ ಒಳ್ಳೆಯ ಉದ್ಯೋಗ ಕೊಡಿಸುವ ವಾಗ್ದಾನದ ಮೇರೆಗೆ ಇಲ್ಲಿಗೆ ಕರೆದುಕೊಂಡು ಬರಲಾಗಿದೆ ಎನ್ನುವ ಸಂಗತಿಯನ್ನು ಹೊರಹಾಕಿದ್ದರು. ಅವರನ್ನು ಸದ್ಯ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಲಾಗಿದೆ. 

ಮಕ್ಕಳ ಬಳಿ ಪತ್ತೆಯಾದ ಆಧಾರ್ ಕಾರ್ಡ್ ಗಳಲ್ಲಿ ಸುಳ್ಳು ಮಾಹಿತಿ ಇರುವುದು ರೈಲ್ವೇ ಅಧಿಕಾರಿಗಳನ್ನು ಆತಂಕಕ್ಕೀಡುಮಾಡಿದೆ. ಮಕ್ಕಳ ಬಳಿಯಿದ್ದ ಆಧಾರ್ ಕಾರ್ಡುಗಳಲ್ಲಿ ಅವರ ವಯಸ್ಸು 18ರಿಂದ ಮೇಲ್ಪಟ್ಟಿದೆ. ಆದರೆ ಪೊಲೀಸ್ ವಿಚಾರಣೆ ಸಂದರ್ಭ ಅವರ ವಯಸ್ಸು 18 ದಾಟದಿರುವುದು ಪತ್ತೆಯಾಗಿದೆ. ಆಧಾರ್ ಕಾರ್ಡುಗಳಲ್ಲಿ ಸುಳ್ಳು ಮಾಹಿತಿ ದಾಖಲಾಗಿರುವುದರ ಬಗ್ಗೆ ರೈಲ್ವೇ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT