ಸಾಂದರ್ಭಿಕ ಚಿತ್ರ 
ರಾಜ್ಯ

ರಾಷ್ಟ್ರೀಯ ಶಿಕ್ಷಣ ನೀತಿ 2020: ಎರಡು ಮುಖ್ಯ ವಿಷಯಗಳಿಗೆ 24 ಆಯ್ಕೆಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವ ನೃಪತುಂಗ ವಿ.ವಿ

 ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ಥಾಪಿತವಾದ ನೃಪತುಂಗ ವಿಶ್ವವಿದ್ಯಾಲಯವು ಎರಡು ಪ್ರಮುಖ ಮತ್ತು ಐಚ್ಛಿಕ ವಿಷಯಗಳ ಆಯ್ಕೆಯೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಸೂತ್ರವನ್ನು ರೂಪಿಸಿದೆ. ವಿದ್ಯಾರ್ಥಿಗಳು ಕೋರ್ಸಿನ ಕೊನೆಯ ತಮ್ಮ ಪದವಿಯನ್ನು ಮುಗಿಸಬಹುದಾಗಿದೆ.

ಬೆಂಗಳೂರು:  ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ಥಾಪಿತವಾದ ನೃಪತುಂಗ ವಿಶ್ವವಿದ್ಯಾಲಯವು ಎರಡು ಪ್ರಮುಖ ಮತ್ತು ಐಚ್ಛಿಕ ವಿಷಯಗಳ ಆಯ್ಕೆಯೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಸೂತ್ರವನ್ನು ರೂಪಿಸಿದೆ. ವಿದ್ಯಾರ್ಥಿಗಳು ಕೋರ್ಸಿನ ಕೊನೆಯ ತಮ್ಮ ಪದವಿಯನ್ನು ಮುಗಿಸಬಹುದಾಗಿದೆ.

ವಿದ್ಯಾರ್ಥಿಯ ಐಚ್ಛಿಕ ಆಯ್ಕೆ ವಿಷಯ ಸಣ್ಣ ವಿಷಯಗಳಿಗೆ ಪೂರಕವಾಗಿರುತ್ತದೆ ಎಂದು ವಿಶ್ವ ವಿದ್ಯಾಲಯ ಉಪಕುಲಪತಿ ಪ್ರೊ.ಶ್ರೀನಿವಾಸ್ ಬಲ್ಲಿ ಅವರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಮೊದಲ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾದ ನಾಲ್ಕು ಆಯ್ಕೆಗಳನ್ನು ಪ್ರತಿ ಇಲಾಖೆಯು ನೀಡುತ್ತದೆ ಎಂದು ತಿಳಿಸಿದ ಬಲ್ಲಿ, ವಿಶ್ವವಿದ್ಯಾನಿಲಯವು ಎರಡು ಪ್ರಮುಖ ವಿಷಯಗಳೊಂದಿಗೆ ನೀಡುವ 26 ಸಂಯೋಜಿತ ವಿಷಯಗಳನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಯು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ್ನು ಆಯ್ಕೆಯ ವಿಷಯವಾಗಿ ಮೊದಲ ಅವಧಿಯ ಐಚ್ಛಿಕವಾಗಿ ತೆಗೆದುಕೊಂಡರೆ, ಎರಡನೆಯ, ಮೂರನೆಯ ಅಥವಾ ನಾಲ್ಕನೇ ಸೆಮಿಸ್ಟರ್‌ಗೆ ಒಂದು ಆಯ್ಕೆಯಾಗಿ ಆಯ್ಕೆ ಮಾಡಿದರೆ ಮೂರನೇ ವರ್ಷದಲ್ಲಿ ಅದೇ ಪಠ್ಯಕ್ರಮವನ್ನು ಹೊಂದಿರುತ್ತಾರೆ. ಬದಲಾಗಿ, ಪ್ರತಿ ಸೆಮಿಸ್ಟರ್‌ನಲ್ಲಿ ಬೇರೆ ಬೇರೆ ಆಯ್ಕೆಯನ್ನು ಆರಿಸಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ ಪರ್ಯಾಯವಾಗಿದೆ ಎಂದು ವಿವಿ ರಿಜಿಸ್ಟ್ರಾರ್ ಡಾ ಕವಿತಾ ಕೆ ಆರ್ ತಿಳಿಸಿದ್ದಾರೆ.

ಪ್ರಧಾನವಾಗಿ ವಿಜ್ಞಾನವನ್ನು ಕಲಿಸುವ ವಿಶ್ವವಿದ್ಯಾಲಯವು ವೈದಿಕ ಗಣಿತದಲ್ಲಿ ಐಚ್ಛಿಕ ಆಯ್ಕೆಯನ್ನು ನೀಡಲು ಯೋಜಿಸುತ್ತಿದೆ (ಇದಕ್ಕಾಗಿ ಸಂಸ್ಕೃತ ವಿಶ್ವವಿದ್ಯಾಲಯದೊಂದಿಗೆ ಅತಿಥಿ ಉಪನ್ಯಾಸಕರಿಗೆ ಮಾತುಕತೆ ನಡೆಸುತ್ತಿದ್ದಾರೆ) ಭಾರತ ದೇಶ ವಿಜ್ಞಾನ, ಅರ್ಥಶಾಸ್ತ್ರ ಮತ್ತು ಭೂವಿಜ್ಞಾನಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.

ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ, ಕ್ಯಾಂಪಸ್‌ನಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎನ್ ಇಪಿ ಮೂಲಕ ಪ್ರವೇಶದ ಬಗ್ಗೆ ಸಂದೇಹವಿರುವವರಿಗೆ ಸಹಾಯವಾಣಿಗಳು ಲಭ್ಯವಿದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯೊಂದಿಗೆ ತಮ್ಮ ಆಯ್ಕೆಗಳನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಲು ಸಹಾಯ ಮಾಡುವುದು ಎಂದು ಉಪ ಕುಲಪತಿ ಡಾ ಶ್ರೀನಿವಾಸ್ ಬಲ್ಲಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT