ಕುವೈಟ್‌ನಿಂದ ಮಂಗಳೂರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸಿದ ಆದಿತಿ ಮತ್ತು 6 ತಿಂಗಳ ಮಗ ಶಿವನ್ಶ್ 
ರಾಜ್ಯ

ಕುವೈತ್‌ನಲ್ಲಿ ಸಿಲುಕಿದ್ದ ತಾಯಿ-ಮಗು ಮಂಗಳೂರಿಗೆ ಪ್ರಯಾಣಿಸಲು 5 ನಿಮಿಷದಲ್ಲಿ ವ್ಯವಸ್ಥೆ ಮಾಡಿಸಿದ ಸಚಿವೆ ಶೋಭಾ ಕರಂದ್ಲಾಜೆ

ಸಮಯಕ್ಕೆ ಸರಿಯಾಗಿ ವಿದೇಶಾಂಗ ಸಚಿವಾಲಯ(ಎಂಇಎ) ನೆರವಾಗಿದ್ದರಿಂದ ಮಹಿಳೆ ಮತ್ತು ಆಕೆಯ ಆರು ತಿಂಗಳ ಮಗು ಕುವೈತ್‌ನಿಂದ ಮಂಗಳೂರು ವಿಮಾನ ಹತ್ತಲು ಸಾಧ್ಯವಾಯಿತು.

ಮಂಗಳೂರು: ಸಮಯಕ್ಕೆ ಸರಿಯಾಗಿ ವಿದೇಶಾಂಗ ಸಚಿವಾಲಯ(ಎಂಇಎ) ನೆರವಾಗಿದ್ದರಿಂದ ಮಹಿಳೆ ಮತ್ತು ಆಕೆಯ ಆರು ತಿಂಗಳ ಮಗು ಕುವೈತ್‌ನಿಂದ ಮಂಗಳೂರು ವಿಮಾನ ಹತ್ತಲು ಸಾಧ್ಯವಾಯಿತು.

ಶನಿವಾರ ಸಂಜೆ ಕೋವಿಡ್ ಮಾರ್ಗಸೂಚಿಯಲ್ಲಿನ ಕೆಲ ಗೊಂದಲಗಳಿಂದಾಗಿ ತಾಯಿ ಮತ್ತು ಮಗು ಸ್ವದೇಶಕ್ಕೆ ವಾಪಸ್ಸಾಗಲು ಅಡ್ಡಿಯಾಗಿತ್ತು. ಕುವೈತ್ ನಲ್ಲಿ ಪತಿ ಜತೆಗಿದ್ದ ಕುಂಟಿಕಾನ ನಿವಾಸಿ ಅದಿತಿ ಸುದೇಶ್ ನಾಯಕ್ ತಮ್ಮ ಬೆನ್ನಮೂಳೆಯ ಚಿಕಿತ್ಸೆಗಾಗಿ ಪುತ್ರ ಶಿವನ್ಶ್ ಸಂಜೆ 5 ಗಂಟೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕಾಗಿ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದರು. ಆದರೆ ಆರ್‌ಟಿಪಿಸಿಆರ್ ವರದಿಯನ್ನು ಹೊಂದಿರದ ಕಾರಣ ಶಿವನಶ್‌ಗೆ ಬೋರ್ಡಿಂಗ್ ಪಾಸ್ ನೀಡಲು ವಿಮಾನ ನಿಲ್ದಾಣದ ಸಿಬ್ಬಂದಿ ನಿರಾಕರಿಸಿದರು. 

ಪ್ರಯಾಣಕ್ಕಾಗಿ ಅದಿತಿ ಕುವೈತ್ ನಲ್ಲಿಯೇ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿ ಪ್ರಮಾಣಪತ್ರವನ್ನು ತಂದಿದ್ದರು. ಆದರೆ ವಿಮಾನ ಪ್ರಯಾಣಕ್ಕೆ ಆರು ತಿಂಗಳ ಮಗುವಿಗೆ ಪರೀಕ್ಷೆ ಅಗತ್ಯವಿಲ್ಲ ಎಂದು ಏರ್ ಇಂಡಿಯಾ ಕಚೇರಿ ಸಿಬ್ಬಂದಿ ತಿಳಿಸಿದ ಕಾರಣ ಮಗುವಿನ ಪರೀಕ್ಷೆ ಮಾಡಿಸಿರಲಿಲ್ಲ. ಇದು ಅವರಿಗೆ ಸಂಕಷ್ಟಕ್ಕೆ ತಂದಿಟ್ಟಿತು.

ಕುವೈತ್ ವಿಮಾನ ನಿಲ್ದಾಣದಲ್ಲಿ ದಾಖಲೆ ಪರಿಶೀಲಿಸಿದ ಅಧಿಕಾರಿಗಳು ಭಾರತದ ಮಾರ್ಗಸೂಚಿ ಪ್ರಕಾರ ಆರ್ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ಮಗುವಿನ ಪ್ರಯಾಣ ಸಾಧ್ಯವಿಲ್ಲ ಎಂದು ಹೇಳಿದ್ದು ಅದರ ವ್ಯವಸ್ಥೆ ಮಾಡಲು ಅವರಿಗೆ 20 ನಿಮಿಷಗಳ ಸಮಯವನ್ನು ನೀಡಿದ್ದರು. 

ಈ ವೇಳೆ ದಂಪತಿಗಳು ತಮ್ಮ ಸಂಬಂಧಿ ಎಂಜಿನಿಯರ್ ಮೋಹನ್‌ದಾಸ್ ಕಾಮತ್ ಅವರನ್ನು ಸಂಪರ್ಕಿಸಿದರು. ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಶೋಭಾ ಕರಂದ್ಲಾಜೆ ಅವರಿಗೆ ಈ ವಿಷಯ ತಿಳಿಸಿದರು. ಸಚಿವರು ಎಂಇಎ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಭಾರತ ವಿಮಾನ ಹತ್ತಲು ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಇದು ಪವಾಡಕ್ಕಿಂತ ಕಡಿಮೆಯಿಲ್ಲ. ಇದೆಲ್ಲವೂ 15 ನಿಮಿಷಗಳಲ್ಲಿ ಆಗಿ ಹೋಯಿತು. ನಾನಲ್ಲ ಆದರೆ ದೇವರು ಮಾತ್ರ ಅವರಿಗೆ ಸಹಾಯ ಮಾಡಿದನು ಎಂದು ಕಾಮತ್ ಹೇಳಿದರು. 

ಮೊದಲಿಗೆ ಕರಂದ್ಲಾಜೆ ಅವರೊಂದಿಗೆ ಮಾತನಾಡಿದಾಗ ಅವರು ಯಾವುದೇ ಭರವಸೆ ನೀಡಿರಲಿಲ್ಲ. ಆದರೆ ಅದಕ್ಕೆ ಪರಿಹಾರ ನೀಡುವ ಭರವಸೆ ನೀಡಿದರು. 'ಆದರೆ 5 ನಿಮಿಷಗಳಲ್ಲಿ ಮತ್ತೆ ಕರೆ ಮಾಡಿದರು. ಮಗು ವಿಮಾನ ಹತ್ತಬಹುದು ಎಂದು ತಿಳಿಸಿದರು ಎಂದು ಕಾಮತ್ ಹೇಳಿದರು. 

ಶನಿವಾರ ತಡರಾತ್ರಿ ಮಂಗಳೂರು ತಲುಪಿದ ಆದಿತಿ, ವಿಮಾನ ನಿಲ್ದಾಣದ ಅಧಿಕಾರಿಗಳು ಸಹಾಯ ಮಾಡಲು ನಿರಾಕರಿಸಿದಾಗ ತಾನು ಮತ್ತು ಪತಿ ತೀವ್ರ ಆತಂಕಕ್ಕೊಳಗಾಗಿದ್ದೇವು ಎಂದು ಹೇಳಿದರು. 'ನಾನು ಅವರನ್ನು ಕಾಡಿ ಬೇಡಿದ್ದೆ, ಅಧಿಕಾರಿಗಳ ಪಾದಗಳಿಗೆ ಬೀಳುವಷ್ಟು ಕಡಿಮೆಯಾಗಿತ್ತು. ಅಷ್ಟರಲ್ಲಿ ಎಂಇಎ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ ನಂತರ, ಅಲ್ಲಿನ ಅಧಿಕಾರಿಗಳೇ ಓಡಿ ಬಂದು ನಮ್ಮನ್ನು ವಿಮಾನಕ್ಕೆ ಕರೆದೊಯ್ದರು ಆದಿತಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT